ಅಡವಿಸಿದ್ದರಾಮಶ್ರೀ ಸ್ವಾಮೀಜಿ ಮಹಿಳೆಯೊಂದಿಗೆ: ಸ್ವಾಮೀಜಿಯನ್ನು ಹೊರದಬ್ಬಿದ ಗ್ರಾಮಸ್ಥರು

Ravi Talawar
ಅಡವಿಸಿದ್ದರಾಮಶ್ರೀ ಸ್ವಾಮೀಜಿ ಮಹಿಳೆಯೊಂದಿಗೆ: ಸ್ವಾಮೀಜಿಯನ್ನು ಹೊರದಬ್ಬಿದ ಗ್ರಾಮಸ್ಥರು
WhatsApp Group Join Now
Telegram Group Join Now

ಬೆಳಗಾವಿ, ಜೂನ್​ 23: ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯಿಂದ ಅನಾಚಾರ ಆರೋಪ ಕೇಳಿಬಂದಿದೆ. ಅಡವಿಸಿದ್ದರಾಮಶ್ರೀ ಸ್ವಾಮೀಜಿ ಮಹಿಳೆಯೊಂದಿಗೆ ಇರುವುದನ್ನು ಕಂಡ ಗ್ರಾಮಸ್ಥರು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿಯನ್ನು ತರಾಟೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಕೆಲ ಯುವಕರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಮಹಿಳೆಯ ಮಗಳ ಬಟ್ಟೆ ಹರಿದು ಎಳೆದಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಗಲಕೋಟೆ ಮೂಲದ ಮಹಿಳೆ ಮತ್ತು ಮಗಳು ಮಠಕ್ಕೆ ಬಂದಿದ್ದು, ರಾತ್ರಿ ಮಠದಲ್ಲೇ ತಂಗಿದ್ದಾರೆ. ಮಹಿಳೆಯೊಂದಿಗೆ ಸ್ವಾಮೀಜಿ ಇದ್ದಾರೆಂದು ಯುವಕರು ಮಠಕ್ಕೆ ನುಗಿದ್ದು, ಈ ವೇಳೆ ಸ್ವಾಮೀಜಿ, ‌ಮಹಿಳೆ ಮತ್ತು ಬಾಲಕಿ ಒಂದೇ ರೂಮ್​ನಲ್ಲಿರುವುದು ಕಂಡುಬಂದಿದೆ.

WhatsApp Group Join Now
Telegram Group Join Now
Share This Article