ರಾಜ್ಯದ ಜನತೆಗೆ ಸತ್ಯವೆನೆಂದು ತಿಳಿಸಿವುದೇ ಈ ಪಾದಯಾತ್ರೆಯ ಉದ್ದೇಶ – ಸುಭಾಷ ಪಾಟೀಲ್

Ravi Talawar
ರಾಜ್ಯದ ಜನತೆಗೆ ಸತ್ಯವೆನೆಂದು ತಿಳಿಸಿವುದೇ ಈ ಪಾದಯಾತ್ರೆಯ ಉದ್ದೇಶ – ಸುಭಾಷ ಪಾಟೀಲ್
WhatsApp Group Join Now
Telegram Group Join Now
ಬೆಳಗಾವಿ.ಎಸ್ ಟಿ ಹಾಗೂ ಮುಡಾ ಹಗರಣದ ಕಿಂಗ್ ಫಿನ್ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯಲಿರುವ ಮೈಸೂರು ಚಲೋ ಪಾದಯಾತ್ರೆ ಇದೇ ಆಗಸ್ಟ್ 3 ರಂದು ಶನಿವಾರ ಬೆಳಗ್ಗೆ ಬೆಂಗಳೂರಿನ (ಕೆಂಗೇರಿ) ಕೆಂಪಮ್ಮ ದೇವಸ್ಥಾನದಿಂದ ಪ್ರಾರಂಭವಾಗಿ ಆಗಸ್ಟ್ 10 ಮೈಸೂರು ತಲುಪಲಿದೆ ನಮ್ಮ ಬೆಳಗಾವಿ ಜಿಲ್ಲೆಯಿಂದ ಅಪಾರ ಪ್ರಮಾಣದಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಜನರಿಗೆ ಸತ್ಯವನ್ನು ಹೇಳುವುದೇ ಮೈಸೂರು ಚಲೋ ಪಾದಯಾತ್ರೆಯ ಉದ್ದೇಶ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಅವರಿಗೆ ಸತ್ಯದ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಾದಯಾತ್ರೆ ಮಾಡುತ್ತಿದ್ದೇವೆ ಎಸ್ ಟಿ, ಮುಡಾ ನಿಗಮದ ಹಗರಣಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷಕ್ಕೆ ಚರ್ಚೆ ನಡೆಸಲು ಅವಕಾಶ ಕೊಟ್ಟಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸತ್ಯವನ್ನು ಎದುರಿಸುವ ಸಾಮರ್ಥ್ಯವಿದ್ದಿದ್ದರೆ ಅವಕಾಶ ಕೊಡುತ್ತಿದ್ದರು. ಹಗರಣದಿಂದ ಸಾವಿರಾರು ಕೋಟಿ, ಲೂಟಿ ಹೊಡೆದು ಲೋಕಸಭೆ ಚುನಾವಣೆಯಲ್ಲಿ ದುರ್ಬಳಕೆ ಮಾಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ  ಆರೋಪಿಸಿದರು.
WhatsApp Group Join Now
Telegram Group Join Now
Share This Article