ದಳವಾಯಿ ಚಿತ್ತಪ್ಪ  ರವರಿಗೆ  ಜನಪದ ಅಕಾಡೆಮಿ ಪ್ರಶಸ್ತಿ ಪ್ರದಾನ 

Ravi Talawar
ದಳವಾಯಿ ಚಿತ್ತಪ್ಪ  ರವರಿಗೆ  ಜನಪದ ಅಕಾಡೆಮಿ ಪ್ರಶಸ್ತಿ ಪ್ರದಾನ 
WhatsApp Group Join Now
Telegram Group Join Now
 ಬಳ್ಳಾರಿ ಮೇ 16 : ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ಬೀದರ್ ಜಿಲ್ಲೆಯಲ್ಲಿ ನಡೆದ 2023- 24 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ವಯೋಸಹಜ ಕಾರಣದಿಂದಾಗಿ   ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಾದ  ದಳವಾಯಿ ಚಿತ್ತಪ್ಪ,  ಜಾನಪದ ಮಹಾಕಾವ್ಯ ಕಲಾವಿದರು ಬಳ್ಳಾರಿ ಜಿಲ್ಲೆ ಇವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ   ಭಾಗವಹಿಸಲು ಸಾಧ್ಯವಾಗಿರುವುದಿಲ್ಲ .  ಆದ್ದರಿಂದ ಇಂದು  ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ  ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಈ ಹಿರಿಯ ಕಲಾವಿದರಿಗೆ ಅವರ ಸ್ವಗೃಹದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
 ಈ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಜಾನಪದ ಅಕಾಡೆಮಿಯ ಸದಸ್ಯರಾದ  ಮಲ್ಲಿಕಾರ್ಜುನ ಕಲಮರಳ್ಳಿ,  ಮಲ್ಲಿಕಾರ್ಜುನ ಕೆಂಕೆರೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ  ಶಿವನಾಯಕ ದೊರೆ ಸೇರಿದಂತೆ   ಅಕಾಡೆಮಿಯ ರಿಜಿಸ್ಟ್ರಾರ್  ನಮ್ರತ ಎನ್ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article