ದೇಶದ ರಕ್ಷಣೆಗಾಗಿ ಅಗ್ನಿವೀರ ಎಂಬ ಕಲ್ಪನೆಯನ್ನು ನೀಡಿ ಭಾರತೀಯ ಸೇನೆಗೆ ಸೇವೆ ಸಲ್ಲಿಸುವದಕ್ಕಾಗಿ ಯುವಕರಿಗೆ ಅವಕಾಶ ಮಾಡಿದ್ದು ಹೆಮ್ಮೆಯ ಸಂಗತಿ
ಬೆಟಗೇರಿ ೩೦: ವಾರ್ಡ ನಂಬರ್ ೭ ರ ಹಬೀಬಗಲ್ಲಿ ಹಾಗೂ ಕೋಚಿಗಲ್ಲಿ ಭಾಗದ ಶ್ರೀ ಆಂಜನೇಯ ಸದ್ಭಕ್ತ ಮಂಡಳಿ ವತಿಯಿಂದ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ದೇಶದ ರಕ್ಷಣೆಗಾಗಿ ಅಗ್ನಿವೀರ ಎಂಬ ಕಲ್ಪನೆಯನ್ನು ನೀಡಿ ಭಾರತೀಯ ಸೇನೆಗೆ ಸೇವೆ ಸಲ್ಲಿಸುವದಕ್ಕಾಗಿ ಯುವಕರಿಗೆ ಅವಕಾಶ ಅನು?ನ ಮಾಡಿದ್ದು ಹೆಮ್ಮೆಯ ಸಂಗತಿ.
ಆ ದೆಸೆಯಲ್ಲಿ ನಮ್ಮ ಭಾಗದ ಕವಡಿಮಟ್ಟಿ ಕುಟುಂಬದ ಮಗನಾದ ಕುಮಾರ ಆಕಾಶ ಬಸವರಾಜ ಕವಡಿಮಟ್ಟಿ ಅವರ ಸತತ ಪ್ರಯತ್ನ ಹಾಗೂ ಶ್ರಮದಿಂದ ಸೇನೆಗೆ ಆಯ್ಕೆಯಾಗಿದ್ದು ನಮ್ಮ ಹೆಮ್ಮೆಯಾಗಿದೆ ಅದಕ್ಕಾಗಿ ಆಂಜನೇಯ ಸದ್ಬಕ್ತ ಮಂಡಳಿ ಹಾಗೂ ನಗರಸಭಾ ಸದಸ್ಯ ಜೊತೆಗೆ ಎಲ್ಲ ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಭಾರತೀಯ ಸೇನೆಗೆ ಸೇವೆ ಸಲ್ಲಿಸುತ್ತಿರುವ ಆಕಾಶ ಬಸವರಾಜ ಕವಡಿಮಟ್ಟಿ ಮಾತನಾಡಿ ಸೇವೆಗೆ ಸೇವೆ ಸಲ್ಲಿಸಬೇಕು ಎಂಬ ಆಶಯದೊಂದಿಗೆ ಸತತ ಪ್ರಯತ್ನ ಮಾಡುತ್ತಿದೆ ಅದಕ್ಕಾಗಿ ನಿತ್ಯ ಅಧ್ಯಯನ ಹಾಗೂ ಶಾರೀರಿಕ ಸದೃಢತೆಗಾಗಿ ಪ್ರತಿ ದಿನ ಶ್ರಮದಾನವನ್ನು ಮಾಡುತ್ತಿದೆ ಈ ಸಾಧನೆಗೆ ನಮ್ಮ ಕುಟುಂಬದ ಪ್ರೇರಣೆ ತುಂಬಾ ಇದೆ. ಹಾಗೆ ಇಂದು ತಾವುಗಳು ನನಗೆ ಪ್ರೀತಿಯಿಂದ ಸನ್ಮಾನ ಮಾಡಿ ಸ್ಪೂರ್ತಿ ನೀಡಿದ್ದಕ್ಕಾಗಿ ನಾನು ಇನ್ನೂ ಹೆಚ್ಚು ಸೇವೆ ಮಾಡಲು ಆಶೀರ್ವಾದ ಸಿಕ್ಕಂತಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ ಹಾಗೂ ಮುತ್ತಣ್ಣ ಕವಡಿಮಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಆಂಜನೇಯ ಸದ್ಭಕ್ತ ಮಂಡಳಿಯ ಎಲ್ಲ ಸದಸ್ಯರು ಆ ಭಾಗದ ಹಿರಿಯರು ಮಹಿಳೆಯರು ಯವಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ದಿ. ೩೦-೦೬-೨೦೨೫ ರಾಘವೇಂದ್ರ ಯಳವತ್ತಿ
ಮೊ : ೯೬೨೦೦ ೪೦೦೬೯