ನವಜಾತ ಶಿಶುಗಳ ಸಾವಿಗೆ ನಿಖರ ಕಾರಣ ತಿಳಿದು, ಪರಿಹಾರ ಕಂಡುಕೊಳ್ಳಬೇಕು: ಶಶಿಧರ್ ಕೋಸಂಬೆ

Ravi Talawar
ನವಜಾತ ಶಿಶುಗಳ ಸಾವಿಗೆ ನಿಖರ ಕಾರಣ ತಿಳಿದು, ಪರಿಹಾರ ಕಂಡುಕೊಳ್ಳಬೇಕು: ಶಶಿಧರ್ ಕೋಸಂಬೆ
WhatsApp Group Join Now
Telegram Group Join Now
ಬಳ್ಳಾರಿ,ಜೂ.19
ನಗರದ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಎನ್‌ಆರ್‌ಸಿ ಘಟಕ, ವಿಶೇಷ ನವಜಾತ ಶಿಶುಗಳ ಆರೈಕೆ ಘಟಕ ಹಾಗೂ ಹೆರಿಗೆ ವಾರ್ಡ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ, ಡಾ.ತಿಪ್ಪೇಸ್ವಾಮಿ ಕೆ.ಟಿ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಕಳೆದ ಐದು ತಿಂಗಳಲ್ಲಿ ನೂರಕ್ಕೂ ಹೆಚ್ಚು ನವಜಾತ ಶಿಶುಗಳ ಮೃತಪಟ್ಟಿರುವುದು ಕಳವಳಕಾರಿ ಸಂಗತಿಯಾಗಿದ್ದು, ವೈದ್ಯರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನವಜಾತ ಶಿಶುಗಳ ಸಾವಿಗೆ ನಿಖರವಾಗಿ ಕಾರಣ ತಿಳಿದು, ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಅವರು ಸೂಚಿಸಿದರು.
ಮಕ್ಕಳ ಅಪೌಷ್ಟಿಕ ಪುನಃಶ್ಚೇತನ ಘಟಕಕ್ಕೆ ಭೇಟಿ ನೀಡಿದ ತಂಡ ದಾಖಲಾದ ಮಕ್ಕಳ ಸ್ಥಿತಿಗತಿ ವಿಚಾರಿಸಿ, ಶೌಚಾಲಯಗಳನ್ನು ಪರಿಶೀಲಿಸಿದರು. ಬಾಲ ಚೈತನ್ಯ ಯೋಜನೆಯಡಿ 23 ಮಕ್ಕಳ ದಾಖಲಾಗಿವೆ. ಅರ್‌ಬಿಎಸ್‌ಕೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿರುವ ಅಪೌಷ್ಟಿಕ ಮಕ್ಕಳನ್ನು ದಾಖಲಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಕಳೆದ ವರ್ಷ 48,569 ನವಜಾತ ಶಿಶುಗಳನ್ನು ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ದಾಖಲಾಗಿದ್ದವು. ಅದರಲ್ಲಿ 293 ನವಜಾತ ಶಿಶುಗಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ. ಪ್ರಸಕ್ತ ವರ್ಷ ಜನವರಿಯಿಂದ ಏಪ್ರೀಲ್‌ವರೆಗೆ 1,119 ನವಜಾತ ಶಿಶುಗಳು ದಾಖಲಾಗಿದ್ದು, 103 ನವಜಾತ ಶಿಶುಗಳು ಮೃತಪಟ್ಟಿವೆ. ಮಕ್ಕಳ ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿಯಬೇಕು ಎಂದು ವೈದ್ಯರಿಗೆ ನಿರ್ದೇಶನ ನೀಡಿದರು.
ಬಿಎಂಸಿಆರ್‌ಸಿ ಯ ವಿಶೇಷ ನವಜಾತ ಶಿಶುಗಳ ಆರೈಕೆ ಘಟಕ ಮತ್ತು ಹೆರಿಗೆ ವಾರ್ಡ್ನಲ್ಲಿ ಸೆಖೆ ಇದ್ದರೂ ಯಾಕೆ ಎಸಿ ಹಾಕಿಲ್ಲ ಎಂದು ವೈದ್ಯರನ್ನು ಪ್ರಶ್ನಿಸಿದರು. ಕೂಡಲೇ ಎಸಿ ಅಳವಡಿಕೆ ಸೂಚನೆ ನೀಡಿದರು. ಇದೇ ವೇಳೆ ದಾಖಲಾಗದ ಮಕ್ಕಳ ಮಾಹಿತಿ ಪಡೆದರು.
ಹೆರಿಗೆ ವಾರ್ಡ್ನಲ್ಲಿನ ಶೌಚಾಲಯ ಹಾಗೂ ಸ್ನಾನ ಗೃಹಗಳನ್ನು ಪರಿಶೀಲಿಸಿದರು. ಇಲ್ಲಿ ತಿಂಗಳಿಗೆ 700ಕ್ಕಿಂತ ಹೆಚ್ಚು ಹೆರಿಗೆ ಆಗುತ್ತಿವೆ. ಸ್ನಾನ ಗೃಹಗಳಲ್ಲಿ ಚಿಕ್ಕ ಗ್ರಾತದ ಗೀಜರ್‌ಯಿಂದ ಬರುವ ಬಿಸಿನೀರು ಬಾಣಂತಿಯರ ಸ್ನಾನಕ್ಕೆ ಸಾಕುಗುತ್ತದೆಯೇ ಎಂದು ವಿಚಾರಿಸಿದ ಅವರು ಬಾಣಂತಿಯರ ಸ್ನಾನಕ್ಕೆ ಬಿಸಿನೀರು ಕೊಡುವುದು ಕರ್ತವ್ಯವಾಗಿದೆ ಎಂದು ತಿಳಿಸಿದರು.
ಬಳಿಕ ನಗರದ ಕಪ್ಪಗಲ್ಲು ರಸ್ತೆಯ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯಕ್ಕೆ  ಆಯೋಗದ ಸದಸ್ಯರು ಭೇಟಿ ನೀಡಿ ದಾಖಲಾತಿ, ಕೊಠಡಿ, ಶೌಚಾಲಯ ಸೇರಿದಂತೆ ಅಡುಗೆ ಕೋಣೆ ಪರಿಶೀಲಿಸಿದರು.
ಬಳಿಕ ಸಿರಿವಾರ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಜೆ ನಂತರ ಶಾಲಾ ಆವರಣದಲ್ಲಿ ಹೊರಗಿನವರು ಬಂದು ಅಹಿತಕರ ಚಟುವಟಿಕೆ ಕೈಗೊಳ್ಳುತ್ತಿರುವುದು ಸ್ಥಳೀಯರು ಗಮನಕ್ಕೆ ತಂದಿದ್ದು, ಪೊಲೀಸರು ನಿಯಮಿತವಾಗಿ ಬಿಟ್ ನಡೆಸಬೇಕು ಎಂದು ಸೂಚಿಸಿದರು.
ಇನ್ನೋರ್ವ ಸದಸ್ಯರಾದ ವೆಂಕಟೇಶ್ ಅವರು, ಅಲ್ಲೀಪುರ ಗ್ರಾಮದ ಬಳಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ವಸತಿ ಕಾಲೇಜು ಮತ್ತು ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಡಿಎಚ್‌ಒ ಡಾ.ವೈ.ರಮೇಶ್ ಬಾಬು, ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ದಿವಾಕರ್ ಕೆ ಶಂಕಿನದಾಸರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಎಳೆ ನಾಗಪ್ಪ ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article