ಪಕ್ಷಬೇಧ ಮರೆತು ಕೆಲಸ ಮಾಡದರೆ ಮಾತ್ರ ಕ್ಷೇತ್ರದ ಅಭಿವೃದ್ದಿ ಸಾಧ್ಯ: ಜಗದೀಶ ಗುಡಗುಂಟಿ

Ravi Talawar
ಪಕ್ಷಬೇಧ ಮರೆತು ಕೆಲಸ ಮಾಡದರೆ ಮಾತ್ರ ಕ್ಷೇತ್ರದ ಅಭಿವೃದ್ದಿ ಸಾಧ್ಯ: ಜಗದೀಶ ಗುಡಗುಂಟಿ
WhatsApp Group Join Now
Telegram Group Join Now

ಜಮಖಂಡಿ-ತಾಲೂಕಿನ ಕೊನ್ಣೂರು ಗ್ರಾಮದ ಮಡ್ಡಿ ವಸತಿಯಲ್ಲಿ ಡಾ. ಬಾಬಾ ಸಹೇಬ ಅಂಬೇಡಕರ ಬಾಲಕಿಯರ ವಸಿತಿ ನಿಲಯ ಶಾಲೆಯ ಉದ್ಘಟನಾ ಸಮಯದಲ್ಲಿ ಮಾಜಿ ಶಸಕರು ಮಾತನಾಡುತ್ತ ತಮ್ಮ ಮಾತು ನಿಲ್ಲಿಸಿದ ಕ್ಷಣವೇ ಹಾಲಿ ಶಾಸಕರು ಎದ್ದು ನಿಂತು ಸುಳ್ಳು ಹೇಳುವದನ್ನು ಬಿಡಬೇಕು ಎಂದಾಗ ಸಭೆಯಲ್ಲಿ ಒಂದು ಕ್ಷಣ ಎರಡೂ ಪಕ್ಷಗಳ ಕಾರ್ಯಕರ್ತರು ಗೊಂದಲೆಬ್ಬಸಿದ ಘಟನೆ ಜರುಗಿತು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡುತ್ತ ಈ ಬಾಗದಲ್ಲಿ ವಿದ್ಯುತ ಸಮಸ್ಯೆಯಿತ್ತು ಅದನ್ನು ನಾವು ಬಂದು ಸರಿಮಾಡಿದ್ದೇವೆ ಈಗ ಅದರ ಸಮಸ್ಯೆಯಿಲ್ಲ ಕ್ಷೇತ್ರದಲ್ಲಿ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಕೆಲಸ ಮಾಡದರೆ ಮಾತ್ರ ಕ್ಷೇತ್ರದ ಅಭಿವೃದ್ದಿ ಸಾಧ್ಯ, ಅದರ ಜೊತೆಗೆ ಈ ವಸತಿ ನಿಲಯಕ್ಕೆ ಭೂದಾನ ಮಾಡಿದ ಕೋಣ್ಣೂರು ದೇಸಾಯಿ ಮನತೆನವನ್ನೇ ಮರೆತಿದ್ದೀರಿ ಭೂದಾನಿಗಳಿಗೆ ನಾವು ಗೌರವ ನಿಡಬೇಕು ಎಂದು ತಮ್ಮ ಮಾತನ್ನು ನಿಲಿಸಿದರು.
ಅದಕ್ಕೆ ಪೂರಕವಾಗಿ ಹಾಲಿ ಶಾಸಕ ಮಾತನಾಡಿ ಈ ಮಡ್ಡಿ ವಸತಿಯಲ್ಲಿ ವಿದ್ಯುತ ಸೌಕರ್ಯವಿರಲಿಲ್ಲ. ನಾವು ಇಲ್ಲಿ ಬಂದು ಸುಮಾರು ೮ ಲಕ್ಷ ರೂಗಳನ್ನು ವ್ಯಯಿಸಿ ವಿದ್ಯುತ ಬರುವ ಹಾಗೆ ಮಾಡಿದ್ದೇವೆ ಇಷ್ಟೊಂದು ಸುಳ್ಳು ಹೇಳಬಾರದು ಎಂದಾಗ ಕಾರ್ಯಕರ್ತರ ನಡೆವೆ ಜಟಾಪಟಿಯೇ ನಡೆಯಿತು ಸಚಿವರ ಮಧ್ಯೆ ಪ್ರವೇಶದಿಂದ ಸಬೆಯು ಶಂತವಾಯಿತು.

ಜನಪ್ರತಿನಿಧಿಗಳು ಸ್ವಹಿತ ಬಯಸುವದಿಲ್ಲ ನಾನು ಜಿಲ್ಲಾ ಉತ್ಸುವಾರಿ ಸಚಿವನಾದರೂ ಕೂಡಾ ಜಿಲೆಯ ಎಲ್ಲ ಕ್ಷೇತ್ರಗಳಿಗೂ ಅಭಿವೃದ್ದಿಯಾಗುವಂತೆ ನೋಡಿಕೊಲ್ಳುತ್ತೇನೆ ಎಲ್ಲಕಡೆ ಪ್ರಾಮುಖ್ಯತೆ ಕೊಡುತ್ತೇವೆ. ಒಂದು ತಾಲೂಕಿನ ಅಭಿವೃಧ್ದಿ ಕಿತ್ತುವ? ಕೀಳು ಮಟ್ದ ರಾಜಕೀಯ ಮಾಡುವದಿಲ್ಲ ಎಂದು ಅಬಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ಸಹಯೋಗದಲ್ಲಿ ನೂತನವಾಗಿ ನಿರ್ಮಿತವಾದ ಡಾ ಬಿ.ಆರ್.ಅಂಬೆಡ್ಕರ ಬಾಲಕಿಯರ ವಸತಿ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು ಈ ವಸತಿ ನಿಲಯಕ್ಕೆ ಭೂದಾನ ಮಾಡಿದ ದಾನಿಗಳನ್ನೇಕೆ ಕರೆದಿಲ್ಲ ಉದ್ಘಾಟನಾ ನಾಮ ಫಲಕದಲ್ಲಿ ಅವರ ಹೆಸರು ಬರಬೇಕು ಎಂದು ಅಧೀಕಾರಿಗಳಿಗೆ ಎಚ್ಚರಿಕೆ ನಿಡಿರು.
ಸರಕಾರಿ ಕಾರ್ಯಕ್ರಮದಲ್ಲಿ ಗಲಾಟೆ ಗದ್ದಗ ನಡೆಯಬಾರದು. ಜನಪ್ರತಿನಿಧಿಗಳ ಹತ್ತಿರ ಕೆಲಸ ತೆಗೆದುಕೊಳ್ಳಿ. ಮಾಜಿ ಶಾಸಕ ಆನಂದ ಅಡಿಗಲ್ಲು ಹಾಕಿದರೆ ನಾನು ಗುಡಗುಂಟಿ ಉದ್ಘಾಟಿಸಿದ್ದೇವೆ. ಇಂತಹ ವ್ಯ್ಸತೇಗೆ ಅನುಗುಣವಾಗಿ ನಡೆಯಬೇಕಿದೆ ಯಾರೂ ತಪ್ಪು ತಿಳಿಯಬಾರದು ಈ ವ್ಯವಸ್ಥೆಗೆ ಹೊಂದುಕೊಳ್ಳಬೆಕು. ಈ ಭಾಗದಲ್ಲಿ ಇಂತಹ ಕಟ್ಟಡ ತಲೆ ಎತ್ತಿ ನಿಂತಿದ್ದು ನಮ್ಮ ಭಾಗ್ಯ. ಪಾಲಕರೇ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ ಇಲ್ಲಿ ಸಾಮರಸ್ಯ ಬದುಕು ಕಲಿಯುತ್ತಾರೆ ಅದು ಬೇರೆಡೆ ಸಿಗುವದಿಲ್ಲ ಎಂದರು.
ಶಾಸಕ ಜಗದೀಶ ಗುಡಗುಂಡಿ ಮಾತನಾಡುತ್ತ ಇಲ್ಲಿ ವಿದ್ಯುತ, ಕುಡಿಯುವ ನೀತಿನ ಸಮಸ್ಯೆಯ ಬಗ್ಗೆ ಪಿಡಿಓಗೆ ಹೇಳಿದರೂಸಹ ಮಾತು ಕೇಳಿಲ್ಲ ಅವರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಅದರ ಜೊತೆಗೆ ಇಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಕ್ಷೇತ್ರದಲ್ಲಿ ೧೬೫೦ ಹಕ್ಕು ಪತ್ರ ವಿಳಂಬವಾಗಿದೆ ಅದನ್ನೂ ಸಹ ಸಚಿವರು ಪರಿಗಣಿಸಬೇಕು. ಬಡಿಗೇರ ಪಿ.ಡಿ.ಓನನ್ನು ಕಿತ್ತು ಹಾಕಿ ಬೇರೆ ಪಿ.ಡಿ.ಓ ನೆಮಿಸಬೇಕು. ತಾಲೂಕಾಡಳಿತ ಭವನದಲ್ಲಿ ಡಾ. ಅಂಬೇಡ್ಜರರ ಮೂರ್ತಿ ಸ್ಥಾಪನೆಗೆ ಸಚಿವರು ಸರಕಾರ ದಿಂದ ಮಾಡಿಸಬೇಕು. ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ ೨೦೨೦ ರಲ್ಲಿ ನಮ್ಮ ಅವಧಿಯಲ್ಲಿ ಅಂದಿನ ಸಚಿವರಾದ ಗೋವಿಂದ ಕಾರಜೋಳರಿಗೆ ಒತ್ತಾಯಿಸಿ ಈ ವಸತಿ ಶಾಲೆ ಪರವಾನಿಗೆ ದೊತೆತಿತ್ತು. ಅದು ಸಾವಳಗಿ ಗ್ರಾಮದಲ್ಲಿ ನಿವೇಶನ ದೊರೆಯದಿದ್ದಾಗ ಅದು ಕೊಣ್ಣೂರ ಗ್ರಾಮದಲ್ಲಿ ೮ ಎಕರೆ ನಿವೇಶನ ಲಬ್ಯವಾಗಿದ್ದು ಅದರಲ್ಲಿ ಸುಮಾರು ೨೧ ಕೋಟಿ ಅನುದಾನದಲ್ಲಿ ಈ ಶಾಲೆ ಮೈದೆಳೆದು ನಿಂತಿದೆ. ಇಲ್ಲಿ ಶೇ ೭೫ ರ? ಪಜಾ.ಪಪಂ ಮತ್ತು ಶೇ ೨೫ ರ? ಹಿಂದುಳಿದ ವರ್ಗದ ಜನರಿಗೆ ಲಭ್ಯ. ಪ್ರವೇಶ ಪರೀಕ್ಷೆಯಲಿ ತೇರ್ಗಡೆಯಾದರೆ ಮಾತ್ರ ಇಲ್ಲಿಪ್ರವೇಶ ಲಭ್ಯ.
೨೦೨೦ ರಲ್ಲಿ ಶಂಕುಸ್ಥಾಪನೆಯಾಗಿತ್ತು ೧.೫ ವ?ದಲ್ಲಿ ಪ್ರಾರಂಭಿಸುವದಿತ್ತು ಅಂದು ತ್ಪಿದ ಉದ್ಘಾಟನೆ ಇಂದು ಪೂರ್ಣವಾಗಿದೆ. ಜನ ಪ್ರತಿನಿಧಿಗಳು ಅಭಿವೃಧ್ದಿಗಾಗಿ ಪಕ್ಷ ಬೇಧ ಮರೆತು ಕೆಲ ಮಾಡಬೇಕು. ಮಂಟೂರ ಏತ ನೀರಾವರಿ ಯೋಜನೆಯಲ್ಲಿ ಪುನರ ನೀರು ತಮಬುವ ಯೋಜನೆಗೆ ೨ ಕೋಟಿ ಅನುದಾನ ಲಭ್ಯವಾಗಿದೆ. ಇನ್ನು ಕೆಲವೇ ದಿನದಲ್ಲಿ ಮರೆಗುದ್ದಿ ಏತ ನೀರಾವರಿ ಯೋಜನೆ ಕೈಗೂಡುತ್ತದೆ ಎಂದರು.
ಕಲ್ಯಾಣ ಹೊರಗಿನ ಮಠದ ಡಾ ವಿಶ್ವಪ್ರಭು ಶ್ರೀಗಳು ಆಶಿರ್ವಚನ ನೀಡಿದರು.
ಕರಿಸಿದ್ದೇಶ್ವರ ಗದ್ದುಗೆ ಪೂಜಾರಿಗಳು. ಎಸಿ ಶ್ವೇತಾ ಬೀಡಿಕರ, ತಹಸೀಲದಾರ ಸದಾಶಿವ ಮಕ್ಕೋಜಿ, ತಾಪಂ ಇಓ ಸಂಜಯ ಜುನ್ನೂರ, ಬಿ.ಎನ್.ಗಸ್ತಿ, ಅಜೇಯ ಕಡಪಟ್ಟಿ, ಮಲ್ಲು ದಾನಗೌಡ, ಈಶ್ವರ ಕರಬಸನವರ, ಗ್ರಾಪಂ ಅಧ್ಯಕ್ಷೆ ಭಾಗವ್ವಾ ಅಗಸರ, ಉಪಾಧ್ಯಕ್ಷ ಸಿದ್ದಪ್ಪ ಎಣ್ಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೇವ ಪಸೋಡಿ, ಪ್ರಾಚಾರ್ಯ ಶಶಿಧರ ಕಡಿವಾಲ, ಸಂತೋ? ತಳಕೇರಿ, ಎಮ್.ವೈ ಪೆಂಡಾರಿ, ಸದಾಗೌಡ ಪಾಟೀಲ, ಮುದಕಣ್ಣಾ ಅಂಬಿಗೇರ, ಅಶೋಕ ಕಿವಡಿ, ಸಂಗಪ್ಪ ಎಮ್ಮೆನ್ನವರು, ಅಬೂಬಕರ ಕುಡಚಿ ಇದ್ದರು.

 

 

WhatsApp Group Join Now
Telegram Group Join Now
Share This Article