ನೇಸರಗಿ: ಸಮೀಪದ ಮೋಹರೆ ಗ್ರಾಮದ ವೀರಯೋಧ ಮಹಾಂತೇಶ ಚಂದ್ರಪ್ಪ ಪಾಟೀಲ (40) ವರ್ಷದ ವೀರ ಯೋಧ ದಿನಾಂಕ 8-9-2025 ರಂದು ಸೇವೆ ಸಲ್ಲಿಸುತ್ತಿವಾಗ ಹೃದಯಘಾತದಿಂದ ನಿಧನರಾದ ಪ್ರಯುಕ್ತ ಇಂದು ಬೆಂಗಳೂರು ಮೂಲಕ ಆಂಬುಲೆನ್ಸ್ ಮೂಲಕ ಮೃತ ದೇಹ ತಂದು ಬೆಳಗಾವಿಯಿಂದ ಮೋಹರೆ ಗ್ರಾಮಕ್ಕೆ ವೀರ ಯೋಧ ಮಹಾಂತೇಶ ಪಾಟೀಲ ಇವರ ಮೃತದೇಹವು ಬುಧವಾರ ದಿ. 10-9-2025 ರ ಬೆಳಿಗ್ಗೆ 9 ಘಂಟೆಗೆ ಬಂದಾಗ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿತ್ತು. ಮಹಾಂತೇಶ ಪಾಟೀಲ ಅಮರ ರಹೇ ಎಂಬ ವೇಧ ಘೋಷಣೆಗಳೊಂದಿಗೆ ಶಾಲಾ ಮಕ್ಕಳು, ಯುವಕರು ವೀರಯೋಧನ ಮೆರವಣಿಗೆ ಮಾಡಿ ಸರ್ಕಾರಿ ಹಾಗೂ ಮಿಲಿಟರಿ ಪೊಲೀಸ್ ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

17-09-2008 ರಂದು ಸಿ ಎಮ್ ಟಿ (ಸೆಂಟ್ರಲ್ ಮಿಲಿಟರಿ ಪೊಲೀಸ್ ) ಸೈನ್ಯದಲ್ಲಿ ಸೇರ್ಪಡೆ ಆಗಿ ಸುಮಾರು 17 ವರ್ಷಗಳ ಕಾಲ ಸೇವೆ ಸಲ್ಲಿಸಿ ,ಸದ್ಯ ಪಶ್ಚಿಮ ಬಂಗಾಳ ರಾಜ್ಯದ, ದುರ್ಗಾಪುರ ಜಿಲ್ಲೆಯ ಪನ್ನಾಗಡ ಎಂಬಲ್ಲಿ ಸೇವೆಯಲ್ಲಿ ಇರುವಾಗ ಹೃದಯಘಾತವಾಗಿ ಮಹಾಂತೇಶ ಪಾಟೀಲ ವೀರ ಮರಣ ಹೊಂದಿದ್ದು, ಮೃತರು ತಾಯಿ, ಪತ್ನಿ, 3 ಜನ ಪುತ್ರಿಯರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ವೀರಯೋಧರ ಅಂತ್ಯ ಕ್ರೀಯೆಯಲ್ಲಿ ಸಿ ಎಮ್ ರಿಜಿಮೆಂಟ್ ಅಧಿಕಾರಿಗಳು, ನೇಸರಗಿ, ದೇಶನೂರ, ಮೋಹರೆ, ಮತ್ತಿಕೊಪ್ಪ ಗ್ರಾಮಗಳ ಮತ್ತು