ಸಮಾಜದ ಬೆಳವಣಿಗೆಗೆ ಗಾನಯೋಗಿ ಪುಟ್ಟರಾಜ ಗವಾಯಿಗಳ ಕೊಡುಗೆ ಅನನ್ಯ

Pratibha Boi
ಸಮಾಜದ ಬೆಳವಣಿಗೆಗೆ ಗಾನಯೋಗಿ ಪುಟ್ಟರಾಜ ಗವಾಯಿಗಳ ಕೊಡುಗೆ ಅನನ್ಯ
WhatsApp Group Join Now
Telegram Group Join Now

ರಾಮದುರ್ಗ: ಗಾನಯೋಗಿ ಲಿಂ. ಪಂಚಾಕ್ಷರಿ ಗವಾಯಿಗಳ ೮೧ ನೇ ಪುಣ್ಯಸ್ಮರಣೆ ಹಾಗೂ ಲಿಂ. ಪುಟ್ಟರಾಜ ಗವಾಯಿಗಳ ೧೫ ನೇ ಪುಣ್ಯಾರಾಧನೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಪಟ್ಟಣದ ಗಾನಯೋಗಿ ಪುಟ್ಟರಾಜ ನಾದಸ್ವರ ಸಂಗೀತ ಪಾಠ ಶಾಲೆಯ ನೇತೃತ್ವದಲ್ಲಿ ಸ್ಥಳೀಯ ಸ್ವಾಮಿ ವಿವೇಕಾನಂದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಮಾತನಾಡಿ, ಗದುಗಿನ ಪುಟ್ಟರಾಜ ಗವಾಯಿಗಳು ಹಾನಗಲ್‌ನ ಕುಮಾರಸ್ವಾಮೀಜಿ, ತುಮಕೂರಿನ ಶಿವಕುಮಾರ ಸ್ವಾಮೀಜಿಗಳು ಸಮಾಜದಲ್ಲಿನ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಊಟ, ವಸತಿ ಮತ್ತು ಶಿಕ್ಷಣ ನೀಡಿ ಮುನ್ನಲೆಗೆ ತಂದಿದ್ದಾರೆ. ನಾನೂ ಕೂಡ ಧಾರವಾಡದ ಮುರುಘಾಮಠದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಅಂಚಿನಲ್ಲಿದ್ದೇನೆ. ಸಮಾಜದ ಬೆಳವಣಿಗೆಗೆ ಗಾನಯೋಗಿ ಪುಟ್ಟರಾಜ ಗವಾಯಿಗಳ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಸ್ಥಳೀಯ ಶಿವಮೂರ್ತೇಶ್ವರ ಮಠದ ಶ್ರೀ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪುಟ್ಟರಾಜ ನಾದಸ್ವರ ಸಂಗೀತ ಪಾಠ ಶಾಲೆಯ ಸಂಸ್ಥಾಪಕ ಪಿ.ಎಂ ಹೂಗಾರ ವಹಿಸಿಸಿದ್ದರು.
ನಿವೃತ್ತ ಶಿಕ್ಷಕರಾದ ಬಿ.ವೈ. ನಡಮನಿ, ಆರ್.ಎಸ್. ಸಂಕಣ್ಣವರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಆನಂದತೀರ್ಥ ಜೋಶಿ, ನಿವೃತ್ತ ಶಿಕ್ಷಕ ಎಸ್.ಎಚ್. ಪ್ರಭಾಕರ, ಬಿಆರ್‌ಸಿ ಎಸ್.ವೈ. ಛಾಯಪ್ಪಗೋಳ, ಬಿ.ಜಿ. ದಾಸರ, ಸ್ವಾಮಿ ವಿವೇಕಾನಂದ ಶಾಲೆಯ ಮುಖ್ಯೋಪಾಧ್ಯಾಯ ಬಿ.ವೈ. ಮಳಲಿ, ಪುಟ್ಟರಾಜ ನಾದಸ್ವರ ಸಂಗೀತ ಪಾಠ ಶಾಲೆಯ ಸಿಬ್ಬಂದಿ, ಸ್ವಾಮಿ ವಿವೇಕಾನಂದ ಶಾಲೆಯ ಶಿಕ್ಷಕ ಸಿಬ್ಬಂದಿ ಸೇರಿದಂತೆ ಇತರರಿದ್ದರು. ಶಿಕ್ಷಕ ಎಸ್.ಎಂ. ಬಡಿಗೇರ ಸ್ವಾಗತಿಸಿದರು. ಬಿಆರ್‌ಪಿ ಕೆ.ವೈ. ಪಾಟೀಲ ನಿರೂಪಿಸಿದರು ಉಲ್ಲಾಸರಾವ ರೇಣಕೆ ವಂದಿಸಿದರು.

WhatsApp Group Join Now
Telegram Group Join Now
Share This Article