ನಾಡಿನ ವಿವಿಧ ಕಲಾವಿದರಿಗೆ ‘ಪಿಆರ್ಟಿ ಕಲಾ ಪ್ರಶಸ್ತಿ ಪುರಸ್ಕಾರ; ಪಿ.ಆರ್. ತಿಪ್ಪೇಸ್ವಾಮಿ ಆಧ್ಯಯನ ಪೀಠ ಪುನಶ್ಚೇತನದ ಭರವಸೆ ನೀಡಿದ ಸಿಎಂ

Ravi Talawar
ನಾಡಿನ ವಿವಿಧ ಕಲಾವಿದರಿಗೆ ‘ಪಿಆರ್ಟಿ ಕಲಾ ಪ್ರಶಸ್ತಿ ಪುರಸ್ಕಾರ; ಪಿ.ಆರ್. ತಿಪ್ಪೇಸ್ವಾಮಿ ಆಧ್ಯಯನ ಪೀಠ ಪುನಶ್ಚೇತನದ ಭರವಸೆ ನೀಡಿದ ಸಿಎಂ
WhatsApp Group Join Now
Telegram Group Join Now

ನಾಡಿನ ವಿವಿಧ ಕಲಾವಿದರಿಗೆ ‘ಪಿಆರ್ಟಿ ಕಲಾ ಪ್ರಶಸ್ತಿ ಪುರಸ್ಕಾರ

ಮೈಸೂರು,20 ಪಿ.ಆರ್. ತಿಪ್ಪೇಸ್ವಾಮಿ ಆಧ್ಯಯನ ಪೀಠ ಪುನಶ್ಚೇತನ ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಆಯೋಜಿಸಿದ್ದ ಪಿ.ಆರ್.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವದಲ್ಲಿ ಕಲಾವಿದರನ್ನು ಗೌರವಿಸಿದ ಬಳಿಕ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದಿಂದ ಸಲ್ಲಿಸಲಾದ ಮನವಿ ಸ್ವೀಕರಿಸಿದ ಅವರು ಭರವಸೆ World’s.

ಚಿತ್ರಕಲಾವಿದ, ಜಾನಪದ ಜಂಗಮ, ಲೇಖಕ ಪಿ.ಆರ್. ತಿಪ್ಪೇಸ್ವಾಮಿ ಅವರು ಈ ನಾಡು ಕಂಡ ಅಪರೂಪದ ವ್ಯಕ್ತಿ. ಹತ್ತು ಹಲವು ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ಅವರ ಹೆಸರನ್ನು ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ, ತಾವು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ವಿಶ್ವವಿದ್ಯಾಲಯದಲ್ಲಿ ತಿಪ್ಪೇಸ್ವಾಮಿ ಅಧ್ಯಯನ ಪೀಠ ಅನುಷ್ಠಾನಗೊಳಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ದಯವಿಟ್ಟು ಅದನ್ನು ಪುನಶ್ಚತನಗೊಳಿಸಲು ಕುಲಪತಿಗೆ ಸೂಚಿಸಬೇಕೆಂದು ಮನವಿ ಮಾಡಲಾಯಿತು.

ಮೈಸೂರು ವಿಶ್ವವಿದ್ಯಾಲಯದ ಜಾನಪದ ವಸ್ತು ಸಂಗ್ರಹಾಲಯ ಪಿ.ಆರ್. ತಿಪ್ಪೇಸ್ವಾಮಿ ಅವರ ಶ್ರಮದ ಫಲ. ದಯವಿಟ್ಟು ವಸ್ತು ಸಂಗ್ರಹಾಲಯಕ್ಕೆ ತಿಪ್ಪೇಸ್ವಾಮಿ ಅವರ ಹೆಸರನ್ನು ನಾಮಕರಣ ಮಾಡಲು ಕ್ರಮ ಕೈಗೊಳ್ಳಬೇಕು, ಬೆಂಗಳೂರಿನ ಚಿತ್ರಕಲಾ ಪರಿಷತ್ ಸಮೀಪದ ರಸ್ತೆ ಅಥವಾ ವೃತ್ತಕ್ಕೆ ಪಿ.ಆರ್. ತಿಪ್ಪೇಸ್ವಾಮಿ ಅವರ ಹೆಸರಿಡಲು ಬಿಬಿಎಂಪಿಗೆ ಸೂಚಿಸಬೇಕೆಂದು ಕೋರುತ್ತೇವೆ.
ಪಿ.ಆರ್. ತಿಪ್ಪೇಸ್ವಾಮಿ ಅವರ ಕಲಾಕೃತಿಗಳನ್ನು ಡಿಜಿಟಲೀಕರಣ ಮಾಡಿಸಲು ಸರ್ಕಾರದಿಂದ ಹೆಚ್ಚಿನ ಧನ ಸಹಾಯ ನೀಡಬೇಕು, ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮೈಸೂರಿನಲ್ಲಿ ನಿವೇಶನವೊಂದನ್ನು ಮಂಜೂರು ಮಾಡಬೇಕು, ಕಲಾವಿದರ ಮಾಸಾಶನದ ಜೊತೆಗೆ ಆರೋಗ್ಯ ವಿಮೆ ಕೊಡಬೇಕೆಂದು ಮನವಿ ಸಲ್ಲಿಸಲಾಯಿತು.

ಕಲಾವಿದ ಪಿ.ಆರ್.ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವದ ಅಂಗವಾಗಿ ನಾಡಿನ ವಿವಿಧ ಕಲಾವಿದರಿಗೆ ‘ಪಿಆರ್ಟಿ ಕಲಾ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಯಿತು.

ವಿಜಯನಗರ ಎರಡನೇ ಹಂತದಲ್ಲಿರುವ ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿರಿಯ, ಕಿರಿಯ ಕಲಾವಿದರು ಹಾಗೂ ಕಲಾಪೋಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿದರು.

ಕಲಾವಿದರಾದ ಬೆಂಗಳೂರಿನ ಕೆ.ವಿ.ಸುಬ್ರಮಹ್ಮಣ್ಯಂ, ಎ.ಜೆ.ಕಮಲಾಕ್ಷಿ, ಮೈಸೂರಿನ ಆರ್.ಜೆ.ಸಿಂಗ್, ರಾಘವೇಂದ್ರಮೂರ್ತಿ, ಕಲಬುರ್ಗಿಯ ಡಾ.ಜಿ.ಎಸ್.ಖಂಡೇರಾವ್, ದಿಲೀಪ್ ಕುಮಾರ್ ಕಾಳೆ, ಡಾ.ಪಿ.ಪರಶುರಾಮ್, ಧಾರವಾಡದ ಎಂ.ಆರ್.ಬಾಳಿಕಾಯಿ, ಸಂಡೂರಿನ ಡಾ.ವಿ.ಟಿ.ಕಾಳೆ, ಗದಗದ ಡಾ.ಡಿ.ಎ.ಉಪಾಧ್ಯ, ಮೂಡಿಗೆರೆಯ ಅಶೋಕ್, ಚಿಕ್ಕಮಗಳೂರಿನ ಮಧು ಶಿಲ್ಪ ಅಚಾರ್ಯ, ಸಿ.ಕಣ್ಮೇಶ್, ಎಂ.ಎಸ್.ಲಿಂಗರಾಜು, ಮಂಗಳೂರಿನ ಸೈಯದ್ ಆಸಿಪ್ ಅಲಿ, ತುಮಕೂರಿನ ಎಸ್.ಎಚ್.ನಾಗರಾಜು, ಹಂಪಿಯ ಡಾ. ಮೋಹನ್ ಪಾಂಚಾಳ್, ಹಿರಿಯೂರಿನ ಜೆ.ನರಸಿಂಹರಾಜು ಅವರನ್ನು ಗೌರವಿಸಲಾಯಿತು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರು, ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್, ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ, ಸಂಚಾಲಕ ರುದ್ರಣ್ಣ ಹರ್ತಿಕೋಟೆ, ಕಾರ್ಯದರ್ಶಿ ಕೆ.ಸಿ.ಮಹದೇವಶೆಟ್ಟಿ ಇತರರು ಉಪಸ್ಥಿತರಿದ್ದರು.

ಪಿ.ಆರ್.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಅಂಗವಾಗಿ ಶತಮಾನೋತ್ಸವದ ಅಂಗವಾಗಿಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲಲಿತಕಲಾ, ಶಿಲ್ಪಕಲಾ, ಜನಾಪದ ಅಕಾಡಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್, ಕದಂಬ ರಂಗ ವೇದಿಕೆ, ಚಿತ್ರವನ ರೆಸಾರ್ಟ್, ರಾಮ್ಸನ್ಸ್ ಕಲಾ ಪ್ರತಿಷ್ಠಾನದಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರಕಲಾ ಪ್ರದರ್ಶನ ಸ್ಪರ್ಧೆ, ಪ್ರಾತ್ಯಕ್ಷಿಕೆಯೂ ಆಯೋಜಿಸಲಾಗಿತ್ತು.

WhatsApp Group Join Now
Telegram Group Join Now
Share This Article