“ನಿಸರ್ಗದ ಕಲೆಯನ್ನ  ಸೃಷ್ಟಿ ಮಾಡಿದವರು ದೇವರು, ಆ ದೇವರನ್ನ ಸೃಷ್ಟಿ ಮಾಡಿದವ ಕಲಾವಿದ”

Ravi Talawar
“ನಿಸರ್ಗದ ಕಲೆಯನ್ನ  ಸೃಷ್ಟಿ ಮಾಡಿದವರು ದೇವರು, ಆ ದೇವರನ್ನ ಸೃಷ್ಟಿ ಮಾಡಿದವ ಕಲಾವಿದ”
WhatsApp Group Join Now
Telegram Group Join Now

ಕುಕನೂರ,ಏಪ್ರಿಲ್16: ನಿಸರ್ಗದ ಕಲೆಯನ್ನ  ಸೃಷ್ಟಿ ಮಾಡಿದವರು ದೇವರು, ಆ ದೇವರನ್ನ ಸೃಷ್ಟಿ ಮಾಡಿದವ ಕಲಾವಿದ ಎಂದು ಗದಗ ಹಿರಿಯ ಸಾಹಿತಿ ಅನ್ನದಾನಿ ಹಿರೇಮಠ ಹೇಳಿದರು.

ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಲಯ ಕಲಾ ಮನೆ ಗದಗ ಮತ್ತು ಬಸವ ಜನ ಕಲ್ಯಾಣ ಸಾಂಸ್ಕೃತಿಕ ಸಂಸ್ಥೆ (ರಿ) ಕುಕನೂರ ಇವರಿಂದ  ನಡೆದ 75ನೇ ರಂಗಭೂಮಿ ಕಲಾವಿದರ ಛಾಯಾಚಿತ್ರ ಮತ್ತು ಲೇಖನ ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡುತ್ತಾ  ಇವತ್ತಿನ ವ್ಯಾಪಾರಿ ಮನೋಬಾವದ ಜನರಲ್ಲಿ ಇಂತಹ ಪ್ರದರ್ಶನ ಗಳಿಂದ ಏನು ಲಾಭವಿದೆ ಎನ್ನುತ್ತಾರೆ, ಆದರೆ ಇಂತಹ ಕಲಾ ಪ್ರದರ್ಶನದಿಂದ ಕಲಾವಿದರ ಕಲೆ ಮತ್ತು ಕಲಾವಿದರು ಜೀವಂತವಾಗಿರಿಸಲು ಸಾಧ್ಯವಾಗುತ್ತದೆ, ಕಲಾವಿದರ ಕಲೆಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ ಕಲಾವಿದರಿಗೆ ಕಲಾವಿದರೆ ಸಾಟಿ ಮತ್ತು ಕನ್ನಡ ನಾಡಿನ ಇತಿಹಾಸದಲ್ಲಿ ಕುಕನೂರ ಬಾಬಣ್ಣನವರ ಹೆಸರು ಅಜಾರಾಮರ ಎಂದು ಹೇಳಿದರು.
 ಲಯ ಕಲಾ ಮನೆ ಸಂಸ್ಥೆಯ ಕಾರ್ಯಾಧ್ಯಕ್ಷ ಶಂಕರಗೌಡ ಮಾತನಾಡಿ ಕಲಾವಿದರನ್ನ ಗೌರವಿಸುವ ಸಂಪ್ರದಾಯ ನಮ್ಮಲ್ಲಿ ಬರಬೇಕು, ಕಲಾವಿದರ ಕಷ್ಟ ಸುಖಗಳಿಗೆ ಸಮಾಜ ಸ್ಪಂದನೆ ಮಾಡಿದಾಗ ಮಾತ್ರ ಕಲಾವಿದರು ಉಳಿಯಲು ಸಾಧ್ಯ, ಕೊಪ್ಪಳ ಜಿಲ್ಲೆ ಈ ನಾಡಿಗೆ ಹಲವಾರು ಬಹುಮುಖ ಪ್ರತಿಭೆಗಳನ್ನ‌ ಕೊಟ್ಟಿದೆ ವಿಶೇಷವಾಗಿ ವಾಗಿ ಕುಕನೂರ ಕಲ್ಮನಿ ಮನೆತನದ ಸೇವೆ ಅಪಾರ, ಇದರ ಜೊತೆಗೆ ಅನ್ನದಾನೀಶ್ವರ ಮಠದ ಕಲಾವಿದರು ಕೂಡ ಉತ್ತಮ ಕಲಾವಿದರಾಗಿ ಸೇವೆ ಮಾಡಿದ್ದಾರೆ ಎಂದರು.
 ನಂತರ ಶ್ರೀಮಠದ ಪೂಜ್ಯ ಡಾ ಮಹಾದೇವ ಸ್ವಾಮೀಜಿ ಮಾತನಾಡಿ ಶಂಕರಗೌಡ ಅವರು ಸುಮಾರು ಮೂರು ದಶಕಗಳ ಕಾಲ ಕಲೆಯ ಸೇವೆಯನ್ನ ಮಾಡುತ್ತೀರುವುದು ಅತ್ಯಂತ ಸಂತೋಷ ತಂದಿದೆ, ಇವರ ಸೇವೆಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸೂಕ್ತ ಗೌರವ ನೀಡಿ ಅವರಿಗೆ ಬೆಂಬಲವಾಗಿ ನಿಲ್ಲಬೇಕು, ಇವರ ಸೇವೆಯಿಂದ ಈ ನಾಡಿನ ಕಲಾವಿದರು ಜೀವಂತವಾಗಿರಲು ಸಾಧ್ಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಕಲಾವಿದ ಶರಣಬಸಪ್ಪ ದಾನಕೈ, ರಾಮಣ್ಣ ಬೆದವಟ್ಟಿ, ಮಹಾದೇವಪ್ಪ ,ರಾಮಣ್ಣ ಇಟಗಿ, ಬಸಪ್ಪ ಬಂಗಿ, ನೀಲಕಂಠಯ್ಯ ಕಾಶೀಮಠ, ರಾಜು ಮಠ,  ಅಮರೇಶ. ಮತ್ತು ಇತರರು ಇದ್ದರು..
WhatsApp Group Join Now
Telegram Group Join Now
Share This Article