ಕಾಕರ್ಲತೋಟ ಕನುಗೋಲು ತಿಮ್ಮಪ್ಪ ರವರ 25ನೇ ವಾರ್ಷಿಕ  ಪುಣ್ಯ ಸ್ಮರಣೆ

Ravi Talawar
ಕಾಕರ್ಲತೋಟ ಕನುಗೋಲು ತಿಮ್ಮಪ್ಪ ರವರ 25ನೇ ವಾರ್ಷಿಕ  ಪುಣ್ಯ ಸ್ಮರಣೆ
WhatsApp Group Join Now
Telegram Group Join Now
*
 ಬಳ್ಳಾರಿ 23..ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ  ಕಾಕರ್ಲತೋಟ ಕನುಗೋಲು ತಿಮ್ಮಪ್ಪ ರವರ 25ನೇ ವಾರ್ಷಿಕ  ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಕನುಗೋಲು ತಿಮ್ಮಪ್ಪ ರವರ ಕುಟುಂಬದವರು ಸೇರಿ ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸುವ ಮೂಲಕ ಉದ್ಘಾಟಿಸಿದರು. ಕಾಕರ್ಲತೋಟ ಕನುಗೋಲು ತಿಮ್ಮಪ್ಪರವರ 25ನೇ ವಾರ್ಷಿಕ ಪುಣ್ಯ ಸ್ಮರಣೆ ಕಾರ್ಯಕ್ರಮದ ನಿಮಿತ್ತ ನಿವೃತ್ತ ಉಪನ್ಯಾಸಕರು ಹಾಗೂ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯರಾದ ಎನ್.ಬಸವರಾಜ್ ರವರು ಮಾತನಾಡುತ್ತಾ ಬಳ್ಳಾರಿಯ ಕಾಕರ್ಲತೋಟ ಗ್ರಾಮದಲ್ಲಿ 07 ,05,1903 ರರಲ್ಲಿ ದೊಡ್ಡ ವೀರಪ್ಪ ರವರ ಮಗನಾಗಿ ಜನಿಸಿದರು.ಮುಂದೆ ಬೆಳೆದು ವ್ಯಾಪಾರವನ್ನು ಪ್ರಾರಂಭಿಸಿ ಉತ್ತಮ ವ್ಯಾಪಾರಿಗಳೆನಿಸಿದರು.1955 ರಲ್ಲಿ ಬಳ್ಳಾರಿ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಗೆದ್ದು ಕೌನ್ಸಿಲರ್ ಆಗಿ ನಗರಕ್ಕೆ ಸೇವೆ ಸಲ್ಲಿಸಿದರು. 1962/69ರ ಮದ್ಯದಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆಗೆ ಹಾಗೂ ಬಳ್ಳಾರಿ ಜನತಾ ಬಜಾರ್ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದರು.1979ರಿಂದ ರಾಜಕೀಯದಲ್ಲಿ ಬೆಳೆದು ಜನತಾ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.1971ರಿಂದ 2000 ವರೆಗೆ ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾಗಿ ಎಲ್ಲರ ಸಹಕಾರದಿಂದ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಿದರು.  ಹಾಗೆಯೇ1981 ರಿಂದ 2000ರದ ವರೆಗೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ರಾಗಿ ಸ್ವಂತ ಕಲಾಕಾರರಾಗಿ ಕನ್ನಡ ಹಾಗೂ ತೆಲುಗು ನಾಟಕ ಗಳನ್ನು ಪ್ರೋತ್ಸಾಹಿಸಿ ಉತ್ತಮ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.   1980/81ರಲ್ಲಿ ಬಳ್ಳಾರಿ ರಾಘವರ ಶತ ಜಯಂತಿ ಉತ್ಸವನ್ನು ವಿಜೃಂಭಣೆಯಿಂದ ಆಚರಿಸಿದರು.ಉಕ್ಕಿನ ಮನುಷ್ಯ ನೆಂದು ಖ್ಯಾತರಾಗಿ ಸದಾ ಸನ್ಮಾರ್ಗದಲ್ಲಿ ನಡೆದು ಇತರರಿಗೂ ಮಾರ್ಗದರ್ಶಕರಾಗಿ ಬಾಳಿ 22/05/2000  ದಲ್ಲಿ ಸ್ವರ್ಗಸ್ಥರಾದರುಬಳ್ಳಾರಿಯ ಎರಡೂ ಸಂಸ್ಥೆಗಳಿಗೆ .ಅವರ ಕೊಡುಗೆ ಅಪಾರವಾಗಿದೆ ಎಂದರು.  ಸಂಸ್ಥೆಯ ಜಂಟಿ ಕಾರ್ಯದರ್ಶಿ  ಶ್ರೀ ಯಂ ರಾಮಾಂಜನೇಯಲು, ಅವರು ಕನುಗೋಲು ತಿಮ್ಮಪ್ಪ ನವರ ಸಾಧನೆಯನ್ನು ಸ್ಮರಿಸಿದರು. ನಿರೂಪಣೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಎನ್ ಪ್ರಕಾಶ್ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ಕೊಟೆಶ್ವರ ರಾವ್, ಗೌರವಾಧ್ಯಕ್ಷ ಶ್ರೀ ಕೆ ಚನ್ನಪ್ಪ, ಉಪಾಧ್ಯಕ್ಷರಳಾದ ಶ್ರೀ ಹೆಚ್ ವಿಷ್ಣುವರ್ಧನ್ ರೆಡ್ಡಿ, ರಮೇಶ್ ಗೌಡ ಪಾಟೀಲ್, ಜಂಟಿ ಕಾರ್ಯದರ್ಶಿ ಶ್ರೀ ಯಂ ರಾಮಾಂಜನೇಯಲು, ಕೆ.ರಾಮಾಂಜನೇಯಲು, ಚೆಲ್ಲಾ ಅಮರೇಂದ್ರ ನಾಥ ಚೌದರಿ,ಕೆ ಕೃಷ್ಣ,ಟಿ.ಜಿ.ವಿಠಲ್,ಗಾದೆಂ ಗೋಪಾಲಕೃಷ್ಣ,ಕೆ ಶ್ಯಾಮ ಸುಂದರ್, ಕನುಗೋಲು ಅನಿಲ್ ಬಾಬು, ಯಶವಂತ ರಾಜ್,ಎ. ಮಂಜುನಾಥ, ಕೆ ಕೃಷ್ಣ,ಶೇಷ ರೆಡ್ಡಿ, ವಿ ರಾಮಚಂದ್ರ, ಭೀಮನೇನಿ ಭಾಸ್ಕರ್,ಭೀಮನೇನಿ ಪ್ರಸಾದ್ ,ರಮಣಪ್ಪ ಭಜಂತ್ರಿ ಮತ್ತು ಕನುಗೋಲು ತಿಮ್ಮಪ್ಪ ರವರ ಕುಟುಂಬದವರು,ಕಲಾವಿದರು ಭಾಗವಹಿಸಿದ್ದರು.ನಂತರ ನಿವೃತ್ತ ಪ್ರಾಂಶುಪಾಲರಾದ ಶ್ರೀ ವೈ ಎಸ್ ಕೃಷ್ಣೆಶ್ವರ ರಾವು ಅವರ ರಚನೆಯಲ್ಲಿ ಶ್ರೀ ಲಾಲ್ ರೆಡ್ಡಿ ನಿರ್ದೇಶನದಲ್ಲಿ
ರಂಗ ಸಂಸ್ಕೃತಿ ವತಿಯಿಂದ *ಸಂಪದ* ತೆಲುಗು ಸಾಮಾಜಿಕ  ನಾಟಕ ಪ್ರದರ್ಶನ ಗೊಂಡಿತು. ಕಲಾವಿದರಗಳಾದ ಲಾಲ್ ರೆಡ್ಡಿ,ಜೆ ಟಿ ಪ್ರವಿಣ್ ಕುಮಾರ್ , ರವಿಂದ್ರ ನಾಥ್,ಜಿ ಆರ್ ವೆಂಕಟೇಶಲು, ಹಸೀನಾ ತಿರುಪತಿ, ಗಂಗಣ್ಣ , ಲತಾ ಶ್ರೀ ಅದ್ಬುತ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಸೂರೆ ಗೊಂಡಿತು.
WhatsApp Group Join Now
Telegram Group Join Now
Share This Article