ಬಳ್ಳಾರಿ;ಮಾ.11- ಹೈದರಾಬಾದ್ ನಲ್ಲಿ ಮಾ.9 ರಂದು ಸರವರಮು ಪ್ರತಾಪ್ ರೆಡ್ಡಿ ಯುನಿವರ್ಸಿಟಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಕಪ್ಪಗಲ್ಲು ಗ್ರಾಮದ ಡಾ. ಸಿ ಮುನಿಸ್ವಾಮಿಗೆ ಇವರ ಸಮಾಜ ಸೇವೆಯನ್ನು ಪರಿಗಣಿಸಿ. ತೆಲಂಗಾಣ ಸರ್ಕಾರ ಪ್ರಜಾ ಸೇವಕಡು ಪ್ರಸಶ್ತಿ ನೀಡಿ ಗೌರವಿಸಿದೆ.
ಕಾರ್ಯಕ್ರಮದಲ್ಲಿ ಮುಖೇಶ್ ಗ್ಲೋಬಲ್ ಪೌಂಡೇಷನ್ ನಿರ್ದೇಶಕ ದಿನೇಷ ಚರ್ಲಪಲ್ಲಿ, ವಿಧಾನಪರಿಷತ್ ಸದಸ್ಯ ಅದಂಕಿ ದಯಾನಂದ, ಮಕ್ಕಳ ರಕ್ಷಣಾ ಆಯೋಗದ ಸದಸ್ಯೆ ಸರಿತಾ, ಗ್ರಾಥಾಲಯ ನಿಗಮದ ಅಧ್ಯಕ್ಷ ಡಾ. ರಿಯಾಜ್, ಗಣ್ಯರಾದ ಪಾರ್ವತಿ, ನಾಗಮಣಿ, ನಲ್ಲ ಭವಾನಿ, ಅನ್ನಪೂರ್ಣ, ಮಹತಿ, ಸಂದ್ಯಾರಾಣಿ, ಸಿರಿ, ವಿಜಯದುರ್ಗ ಮೊದಲಾದವರು ಇದ್ದರು.


