ಬಳ್ಳಾರಿ09.: ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜೂ.29 ರಂದು ನಗರದ ಸಂಗನಕಲ್ಲೂ ರಸ್ತೆಯ ಶ್ರೀ ಶೃಂಗೇರಿ ಶಂಕರ ಮಠದ ಸಭಾoಗಣದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಆರ್.ಪ್ರಕಾಶ್ ರಾವ್, ಕಾರ್ಯದರ್ಶಿ ಬಿ.ಕೆ.ಬಿ.ಎನ್. ಮೂರ್ತಿ ಹಾಗೂ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಡಿ.ಶ್ರೀನಾಥ್ ಅವರು ತಿಳಿಸಿದ್ದಾರೆ. ಕಳೆದ 2025 ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಬಳ್ಳಾರಿ ಬ್ರಾಹ್ಮಣ ಒಕ್ಕೂಟದಿಂದ ಜೂ.29ರಂದು ಪ್ರತಿಭಾ ಪುರಸ್ಕಾರ ಸಮಾರಂಭವನ್ನು (ಬಳ್ಳಾರಿ ನಗರ ವಿದ್ಯಾರ್ಥಿಗಳಿಗೆ) ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇತ್ತೀಚಿನ ಭಾವಚಿತ್ರ, ಸ್ವವಿವರ, ಮೊಬೈಲ್ ಸಂಖ್ಯೆ, ಶಾಲೆ, ಕಾಲೇಜಿನಿಂದ ದೃಢೀಕರಿಸಿದ ನಕಲು ಅಂಕಪಟ್ಟಿ ಪ್ರತಿಗಳನ್ನು ನಗರದ ಸತ್ಯನಾರಾಯಣ ಪೇಟೆ, 1ನೇ ಕ್ರಾಸ್ ಶ್ರೀ ಗುರು ವಾದಿರಾಜ ನೆಟ್ ವರ್ಕ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬ್ರಾಹ್ಮಣ ಒಕ್ಕೂಟ ಬಳ್ಳಾರಿ, 3ನೇ ಕ್ರಾಸ್, ಎಸ್ ಎನ್ ಪೇಟೆ ಬಳ್ಳಾರಿ ಹಾಗೂ ಶ್ರೀ ಗುರು ವಾದಿರಾಜ ನೆಟ್ ವರ್ಕ್, 1ನೇ ಕ್ರಾಸ್, ಎಸ್ ಎನ್ ಪೇಟೆ ಬಳ್ಳಾರಿ 9740680106, 9900973959, 6364173669 ಸಂಖೆಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.