ಸುರೇಶ ತಾಕತರಾವ ಅವರಿಗೆ ಪಿಎಚ್ .ಡಿ ಪದವಿ ಪ್ರಧಾನ 

Hasiru Kranti
ಸುರೇಶ ತಾಕತರಾವ ಅವರಿಗೆ ಪಿಎಚ್ .ಡಿ ಪದವಿ ಪ್ರಧಾನ 
WhatsApp Group Join Now
Telegram Group Join Now
ಬೆಳಗಾವಿ  ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಸುರೇಶ ತಾಕತರಾವ  ಅವರು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗಕ್ಕೆ ಸಲ್ಲಿಸಿದ  *”ಆ್ಯನ್ ಐಡಿಯಾಲಾಜಿಕಲ್ ಕಾಂಟ್ರಾಡಿಕ್ಷನ್ಸ್ ಇನ್ ಇಂಡಿಯನ್ ಪಾಲಿಟಿಕ್ಸ್ ಸಿನ್ಸ್ -1951″*. ಎಂಬ ಮಹಾ ಪ್ರಬಂಧಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಸಮಕಾಲೀನ ಭಾರತದ ರಾಜಕಾರಣದಲ್ಲಿನ ಸೈದ್ಧಾಂತಿಕ ಸಂಘರ್ಷಗಳ ಕುರಿತು ತಮ್ಮ ಮಹಾ ಪ್ರಬಂಧದಲ್ಲಿ ವಿಶ್ಲೇಷಣೆ ಮಾಡಿರುವ ಸುರೇಶ ಅವರು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ವ್ಹಾಯ್.ಎಸ್. ಬಲವಂತಗೋಳ ಮಾರ್ಗದರ್ಶನ ಮಾಡಿದ್ದಾರೆ. ಇವರ ಈ ಸಾಧನೆಗೆ ಕುಟುಂಬ ವರ್ಗದವರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
WhatsApp Group Join Now
Telegram Group Join Now
Share This Article