ಸುಬುಧೇಂದ್ರ ಶ್ರೀ , ಸತ್ಯಾತ್ಮ ತೀರ್ಥರ ಭೇಟಿ: ಕಾನೂನು ಸಂಘರ್ಷಕ್ಕೆ ತೆರೆ

Ravi Talawar
ಸುಬುಧೇಂದ್ರ ಶ್ರೀ , ಸತ್ಯಾತ್ಮ ತೀರ್ಥರ ಭೇಟಿ:  ಕಾನೂನು ಸಂಘರ್ಷಕ್ಕೆ ತೆರೆ
WhatsApp Group Join Now
Telegram Group Join Now

ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥರು ಇಬ್ಬರು ಭೇಟಿಯಾಗಿರುವುದು ಉಭಯ ಮಠದ ಭಕ್ತರಿಗೆ ಹೊಸ ಆಶಾಭವನೆ ಮೂಡಿಸಿದೆ.

ರಾಯರಮಠ ಹಾಗೂ ಉತ್ತರಾದಿ ಮಠದ ನಡುವೆ ಹಲವು ವರ್ಷಗಳಿಂದ ಕಾನೂನು ಸಂಘರ್ಷ ನಡೆಯುತ್ತಿತ್ತು. ಆದರೆ, ಈ ಸಂಘರ್ಷವನ್ನು ಸೌಹರ್ದಯುತವಾಗಿ ಮಾತುಕತೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿದ್ದು, ಉಭಯ ಶ್ರೀಗಳು ಸಮಗಮವಾಗಿದೆ.

ಸರ್ವೋಚ್ಚ ನ್ಯಾಯಾಲಯ ಸೂಚಿಸಿದಂತೆ ಚೆನ್ನೈನಲ್ಲಿ ಗುರುವಾರ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಸಂಜಯ್ ಕೌಲ್ ಮಧ್ಯಸ್ಥಿಕೆಯಲ್ಲಿ ಎರಡು ಮಠಗಳ ಪೀಠಾಧಿಪತಿಗಳು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಉಭಯ ಮಠಗಳ ಅಸಂಖ್ಯಾತ ಭಕ್ತ ಗಣದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಸಮಾಜದ ಹಿತದ ದೃಷ್ಠಿಯಿಂದ ಒಳ್ಳೆಯ ರೀತಿಯಲ್ಲಿ ವಿವಾದಗಳನ್ನು ಬೇಗನೆ ಪರಿಹಾರ ಕಂಡುಕೊಡು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾಗಿದೆ.

 

WhatsApp Group Join Now
Telegram Group Join Now
Share This Article