ಸರಿಯಾದ ಸಮಯಕ್ಕೆ ಬಸ್ ಸಂಚಾರಕ್ಕೆ ವಿದ್ಯಾರ್ಥಿಗಳ ಅಗ್ರಹ

Ravi Talawar
ಸರಿಯಾದ ಸಮಯಕ್ಕೆ ಬಸ್ ಸಂಚಾರಕ್ಕೆ ವಿದ್ಯಾರ್ಥಿಗಳ ಅಗ್ರಹ
WhatsApp Group Join Now
Telegram Group Join Now
ನೇಸರಗಿ: ನಿಗದಿತ ಸಮಯಕ್ಕೆ ಸರ್ಕಾರಿ ಬಸ್ಸುಗಳು  ಬಾರದೇ ಶಾಲಾ ಕಾಲೇಜುಗಳಿಗೆ  ಸರಿಯಾದ ಸಮಯಕ್ಕೆ ಕ್ಲಾಸುಗಳಿಗೆ ಹೋಗಲು ಆಗದ ಹಿನ್ನಲೆಯಲ್ಲಿ ಹನುಮನಹಟ್ಟಿ, ಹೋಗರ್ತಿ, ಕೊಳ್ಳನಟ್ಟಿ, ದೇಶನೂರ, ಮೋಹರೆ, ಕೊಳದೂರ ಗ್ರಾಮಗಳ ವಿದ್ಯಾರ್ಥಿಗಳು ಇಂದು ನೇಸರಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ನೇಸರಗಿ ಸಾರಿಗೆ ಸಂಚಾರಿ ನಿಯಂತ್ರಕರಾದ ಶರಣು ಮೇಲಕುಂದಿ  ಅವರಿಗೆ ಮನವಿ ಸಲ್ಲಿಸಿದರು.
ಮಲ್ಲಾಪುರ ಕೆ ಎನ್ ಗ್ರಾಮದ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ   ಸಾರಿಗೆ ನಿಯಂತ್ರಕ ಪ್ರಕಾಶ ಹಿರೇಮಠ, ಯುವ ಮುಖಂಡ  ಗಂಗಾಧರ ಮಾವಿನಕಟ್ಟಿ, ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article