ಜ್ಞಾನ ವಿಕಾಸ ಕಾರ್ಯಕ್ರಮದಡಿ ಬೀದಿ ನಾಟಕ

Ravi Talawar
ಜ್ಞಾನ ವಿಕಾಸ ಕಾರ್ಯಕ್ರಮದಡಿ ಬೀದಿ ನಾಟಕ
WhatsApp Group Join Now
Telegram Group Join Now

ಧಾರವಾಡ : ತಾಲೂಕಿನ ಮನಸೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಂಗಳವಾರ ಬೀದಿ ನಾಟಕ ಕಾರ್ಯಕ್ರಮ ನಡೆಯಿತು.
ಬೀದಿ ನಾಟಕ ಉದ್ಘಾಟಿಸಿದ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ಬೀದಿ ನಾಟಕದ ಧ್ಯೇಯೋದ್ದೇಶ ವಿವರಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಕೆ.ಎಸ್.ಅಮ್ಮಿನಭಾವಿ ಮಾತನಾಡಿ, ಕ್ಷೇತ್ರದ ವತಿಯಿಂದ ಆಯೋಜಿಸುವ ವಿವಿಧ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಮಲ್ಲನಗೌಡ ಪಾಟೀಲ, ಪ್ರಗತಿ ಪರ ಕೃಷಿಕ ಶಂಕರ, ತಾಲೂಕಿನ ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು, ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಧಾರವಾಡದ ಯುವಜನ ಕಲಾ ಸಂಘದ ಸದಸ್ಯರು ಬೀದಿ ನಾಟಕ ದ ಮೂಲಕ ಜಾಗೃತಿ ಮೂಡಿಸಿದರು.

WhatsApp Group Join Now
Telegram Group Join Now
Share This Article