ಬಳ್ಳಾರಿ. ಆಗಸ್ಟ್ 05. : ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ (ರಿ) ಕರ್ನಾಟಕ ಕಡಲಬಾಳು ಹಗರಿಬೊಮ್ಮನಹಳ್ಳಿ (ತಾ) ವಿಜಯನಗರ ಜಿಲ್ಲೆ ಇವರ ವತಿಯಿಂದ ಕೊಡ ಮಾಡುವ ಕನ್ನಡ ನಾಡು ನುಡಿ, ನೆಲೆ, ಜಲ, ಸಾಂಸ್ಕೃತಿಕ ಸಾಹಿತ್ಯ, ಸಾಮಾಜಿಕ ಸಂಶೋಧನೆ, ಶಿಕ್ಷಣ, ಕೃಷಿ, ಯೋಗ, ಪತ್ರಿಕೋದ್ಯಮ, ವೈದ್ಯಕೀಯ, ನೃತ್ಯ, ಕಲಾ ಮತ್ತು ನಾಟಕ, ಸಿನಿಮಾ ಮುಂತಾದ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸಿ ಧಾರವಾಡ ಜಾನಪದ ನುಡಿ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ರಾಜ್ಯ ಮಟ್ಟದ ಉತ್ತಮ ನಾಟಕ ಕಲಾ ಸೇವರತ್ನ ಪ್ರಶಸ್ತಿಯನ್ನು ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನ ಧಾರವಾಡದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಾಟಕ ವಿಭಾಗದ ಉಪನ್ಯಾಸಕರಾದ ಅಸೂಟಿ ಶ್ರೀನಿವಾಸ ರವರಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ನಾಗರಾಜ ಮತ್ತು ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳು ನೀಡಿ ಗೌರವಿಸಿ ಸನ್ಮಾನಿಸಿದ್ದಾರೆ.