ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ದ ಜಾರಿ ನಿರ್ದೇಶನಾಲಯದ ಷಡ್ಯಂತ್ರ :  ಶ್ರೀಕಾಂತ್ 

Ravi Talawar
ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ದ ಜಾರಿ ನಿರ್ದೇಶನಾಲಯದ ಷಡ್ಯಂತ್ರ :  ಶ್ರೀಕಾಂತ್ 
WhatsApp Group Join Now
Telegram Group Join Now
  ಬಳ್ಳಾರಿ.ಏ. 18 :  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿರೋಧ  ಪಕ್ಷಗಳ  ಮುಖಂಡರ ವಿರುದ್ಧ  ಇಡಿ ಸಿಬಿಐ ಸೇರಿದಂತೆ ಕೇಂದ್ರ ಸರ್ಕಾರದ ಆದಿನದಲ್ಲಿರುವ   ತನಿಖಾ ಸಂಸ್ಥೆಗಳನ್ನು ನಿರಂತರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದ್ವೇಷ ರಾಜಕಾರಣ ನಡೆಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ದ ಇ.ಡಿ ಸಂಸ್ಥೆ ಆರೋಪ ಪಟ್ಟಿ ದಾಖಲಿಸಿರುವುದೇ ಸಾಕ್ಷಿಯಾಗಿದೆ  ಇದನ್ನು ಯುವ ಕಾಂಗ್ರೆಸ್ ಘೋರವಾಗಿ ಖಂಡಿಸಿತ್ತದೆ ಎಂದು ಯುವ ಕಾಂಗ್ರೆಸ್ ಪಕ್ಷದ ಶ್ರೀಕಾಂತ್ ಕೇಂದ್ರ ಸರ್ಕಾರದ ವಿರುದ್ಧ  ಆಕ್ರೋಶವನ್ನು ವ್ಯಕ್ತಪಡಿಸಿದರು
 ಅವರು ಇಂದು ನಗರದ  ರಾಯಲ್ ಸರ್ಕಲ್ ನಿಂದ ಪ್ರತಿಭಟನಾ ಮೆರವಣಿಗೆಯನ್ನು ಮುಖಾಂತರ   ಕೇಂದ್ರ ಅಂಚೆ ಕಚೇರಿಯ ವರೆಗೆ  ತೆರಳಿ
 ಅಲ್ಲಿ ಕೆಲ ಹೊತ್ತು ಪ್ರತಿಭಟನೆಯನ್ನು ನಡೆಸಿ ಮಾತನಾಡಿದ ಶ್ರೀಕಾಂತ್ ಈ ವಿಷಯದಲ್ಲಿ ತಕ್ಷಣ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಬೇಕು. ಸಾಂವಿಧಾನಿಕ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
 ಈ ಪ್ರತಿಭಟನೆಯಲ್ಲಿ  ನಿಕಟಪೂರ್ವ ಜಿಲ್ಲಾಧ್ಯಕ್ಷರು ಸಿದ್ದು ಹಳ್ಳೆಗೌಡ,  ಜಿಲ್ಲಾ  ನಗರ ಮತ್ತು ಗ್ರಾಮಾಂತರ ಅಸೆಂಬ್ಲಿ,  ಬ್ಲಾಕ್,  ಅಧ್ಯಕ್ಷರು ಗಳು ಮತ್ತು ಜಿಲ್ಲೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article