ಕಂಪ್ಲಿ:-ಮೇ 22 ತಾಲೂಕಿನ ಮಾವಿನಹಳ್ಳಿಯ ಗ್ರಾಮದ ಶ್ರೀ ಸಿದ್ದಪ್ಪ ತಾತನ ದೇವಸ್ಥಾನದವರೆಗೆ ರಸ್ತೆ ಮಾಡಲು ಎಷ್ಟು ಸಾರಿ ಹೇಳಿದರು ಈ ಕಡೆ ಗಮನಹರಿಸದ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಕ್ಷೇತ್ರದ ಶಾಸಕರು ಕೆಸರು ಗದ್ದೆಯಂತೆ ಮಾವಿನಹಳ್ಳಿಯ ಶ್ರೀ ಸಿದ್ದಪ್ಪ ತಾತನ ರಸ್ತೆ ಮಳೆ ಬಂದರೆ ಓಡಾಡುವ ಕಷ್ಟವಾಗುತ್ತದೆ. ಸರಿಯಾಗಿ ಸೈಕಲ್ ಮೋಟಾರ್ ಸವಾರಿ ಮಾಡಲು ಆಗುವುದಿಲ್ಲ. ಇದರಿಂದ ಜನರು ಓಡಾಟ ನಡೆಸಲು ಹಿಂಜರಿಯುತ್ತಾರೆ. ಹೊಲಗಳಿಗೆ ಹೋಗಲು ಈ ದಾರಿ ಮುಖಾಂತರ ದಿನ ನಿತ್ಯ ಸಂಚಾರ ಮಾಡಬೇಕು ಆದರೆ ಈ ರೀತಿ ಆದರೂ ಸಹ ಗ್ರಾಮೀಣ ಜನರಿಗೆ ಸರಿಯಾಗಿ ಸೌಲಭ್ಯಗಳನ್ನು ನೀಡುವುದಿಲ್ಲ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಸಹ ನಡೆಯುವುದಿಲ್ಲ ಎಂದು ಜನರು ಬೇಸತ್ತು ಹೋಗಿದ್ದಾರೆ. ಗ್ರಾಮ ಪಂಚಾಯಿತಿ ಸುಗ್ಗೇನಹಳ್ಳಿ ಪಿಡಿಓ ಮತ್ತು ಕಾರ್ಯದರ್ಶಿ ಹಾಗೂ ಕಂಪ್ಲಿ ಕ್ಷೇತ್ರದ ಶಾಸಕರು ಕೂಡಾ ಗ್ರಾಮೀಣ ಜನತೆಗೆ ಮನ ಹರಿಸಿ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಊರಿನ ಸಾರ್ವಜನಿಕರು ಹೇಳುತ್ತಾರೆ.