ಧಾರವಾಡ: ಇತ್ತೀಚೆಗೆ ನಿಧನರಾದ ಹಿರಿಯ ಕವಿ, ಸಾಹಿತಿ ಎಚ್.ಎಚ್. ವೆಂಕಟೇಶಮೂರ್ತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಧಾರವಾಡದಲ್ಲಿ ವಿಶೇಷವಾಗಿ ಎಚ್ಎಸ್ವ್ಹಿಯವರ ಗೀತೆಗಳ ಹಾಡುಗಾರಿಕೆ, ಉಪನ್ಯಾಸದ ಜೊತೆಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹೂವಿನಹಡಗಲಿಯ ಸ್ವರದೇಸಿ ತಂಡ ಹಾಗೂ ಧಾರವಾಡದ ಚೇತನ್ ಫೌಂಡೇಶನ್ ಸಹಯೋಗದಲ್ಲಿ ಜೂನ್ 7ರಂದು ಸಂಜೆ 6ಕ್ಕೆ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆಯಲಿದೆ.
ಸ್ವರದೇಸಿ ತಂಡದ ಕಲಾವಿದರು ಎಚ್ಎಸ್ವಿಯವರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದು, ಹಿರಿಯ ಸಾಹಿತಿಗಳಾದ ಆನಂದ ಝುಂಜರವಾಡ, ಹ.ವೆಂ. ಕಾಖಂಡಕಿ ಅವರು ಎಚ್ಎಸ್ವಿ ಜೊತೆಗಿನ ಒಡನಾಟ ಹಾಗೂ ಅವರ ಕಾವ್ಯಗಳ ಕುರಿತು ಮಾತನಾಡುವರು ಎಂದು ಆಯೋಜಕರಾದ ರಾಜಕುಮಾರ ಮಡಿವಾಳರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.