ಮುದ್ದೇಬಿಹಾಳ ; ಪುರಸಭೆಯ ಸದಸ್ಯರು ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ದಿ.ಚನ್ನಪ್ಪ ಕಂಠಿ ಅವರ ಅಗಲಿಕೆಗೆ ಪುರಸಭೆ ಸಭಾ ಭವನದಲ್ಲಿ ಸೋಮುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚನ್ನಪ್ಪ ಕಂಠಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಿ ಪುಷ್ಟಾರ್ಚನೆಯನ್ನು ಸಲ್ಲಿಸಲಾಯಿತು
ಈ ವೇಳೆ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ನಾಮನಿರ್ದೇಶಿತ ಸದಸ್ಯ ಗೋಪಿ ಮಡಿವಾಳರ, ಹರೀಶ ಬೇವೂರ, ಸದಸ್ಯರಾದ ಪ್ರತಿಭಾ ಅಂಗಡಗೇರಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ ದಿ.ಚನ್ನಪ್ಪ ಕಂಠಿ ಅವರ ವ್ಯಕ್ತಿತ್ವ ಕುರಿತು ನುಡಿ ನಮನ ಸಲ್ಲಿಸಿದರು.
ಈ ವೇಳೆ ಸದಸ್ಯರಾದ ಶಹಜಾದಬಿ ಹುಣಚಗಿ, ಶಾಂತಾಬಾಯಿ ಪೂಜಾರಿ,ಭಾರತಿ ಪಾಟೀಲ್,ಶಿವು ಶಿವಪೂರ, ಸಂತೋಷ ನಾಯ್ಕೋಡಿ,ಲಲಿತಾ ಇಲಕಲ್, ಬಪ್ಪು ಹುಣಚಗಿ, ಅಶೋಕ ವನಹಳ್ಳಿ ಹಾಗೂ ಪುರಸಭೆ ಸಿಬ್ಬಂದಿಗಳು ಭಾಗವಹಿಸಿದ್ದರು