ನಾಯಕನಹಟ್ಟಿಯಲ್ಲಿ ಶಕ್ತಿ ಗಣಪತಿ ಮಹೋತ್ಸವದ ಹಾಸ್ಯ ನಾಟಕ ಜನಮನ ಸೆಳೆಯಿತು

Ravi Talawar
ನಾಯಕನಹಟ್ಟಿಯಲ್ಲಿ ಶಕ್ತಿ ಗಣಪತಿ ಮಹೋತ್ಸವದ ಹಾಸ್ಯ ನಾಟಕ ಜನಮನ ಸೆಳೆಯಿತು
WhatsApp Group Join Now
Telegram Group Join Now
ಚಿತ್ರದುರ್ಗ:  ಜಿಲ್ಲೆಯ ಚಳ್ಳಕೆರೆ ತಾಲೂಕಿನ    ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ವತಿಯಿಂದ 33ನೇ ವರ್ಷದ ಶಕ್ತಿ ಗಣಪತಿ ಮಹೋತ್ಸವ ಭವ್ಯವಾಗಿ ಜರುಗಿತು. ಈ ಸಂದರ್ಭದಲ್ಲಿ ಬಳ್ಳಾರಿಯ ಮಹಾ ದೇವಾ ತಾತ ಕಲಾ ಸಂಘ (ರಿ)ಹಂದ್ಯಾಳು  ಕಲಾವಿದರು. ದಿವಂಗತ ಶಂಕರ ನಾಯ್ಡು ಅವರ ಕೃತಿ ‘ಧನ ಕಾಯುವರ ದೊಡ್ಡಟ’ ಹಾಸ್ಯ ನಾಟಕವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಅಕ್ಷರಜ್ಞಾನದ ಮಹತ್ವವನ್ನು ಮನರಂಜನಾತ್ಮಕ ರೀತಿಯಲ್ಲಿ ತಲುಪಿಸಿದ ಈ ನಾಟಕ, ಸಾಕ್ಷರತಾ ಸಂದೇಶವನ್ನು ಜನಮನದಲ್ಲಿ ಬಿತ್ತಿತು. ಪಾತ್ರ ನಿರ್ವಹಣೆ:
ಸಾರಥಿಯಾಗಿ  ಪುರುಷೋತ್ತಮ ಹಂದ್ಯಾಳು   ಗಣಪತಿಯಾಗಿ ದಾನಯ್ಯಸ್ವಾಮಿ, ದುರ್ಯೋಧನನಾಗಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನನಾಗಿ ಪಾರ್ವತೀಶ ಗೆಣಿಕೆಹಾಳ್, ದ್ರೌಪದಿ ಮತ್ತು ನೃತ್ಯಗಾರ್ತಿಯಾಗಿ ಮೌನೇಶ್ ಕಲ್ಲಳ್ಳಿ, ನಕುಲ-ಸಹದೇವರಾಗಿ ಗುರು ಮೋಕ.ಮತ್ತು ಲಿಂಗಪ್ಪ ಹಂದ್ಯಾಳು, ಕೃಷ್ಣನಾಗಿ ಕುಮಾರಗೌಡ  ಅಮರಪುರ ಹಾಗೂ ಕಥಾಸಂಚಾಲಕನಾಗಿ ಸುಂಕಣ್ಣ ಹೊಸಯರಗುಡಿ .
ರುದ್ರಮುನಿ ಸ್ವಾಮಿ ಪ್ರೇಕ್ಷಕರನ್ನು ರಂಜಿಸಿದರು ಎರ್ರಿಸ್ವಾಮಿ ಆಚಾರ್ ಹಾರ್ಮೋನಿಯಂನಲ್ಲಿ, ಗಾದಿಲಿಂಗಪ್ಪ ಅಮರಾಪುರ ತಬಲಾದಲ್ಲಿ ಕಲಾವಿದರಿಗೆ ಸಂಗೀತಸಾಥ್ ನೀಡಿದರು.
ಜನಸಂದಣಿಯಲ್ಲಿ ನಡೆದ ಈ ನಾಟಕವು ಮನರಂಜನೆ ಮತ್ತು ಸಂದೇಶ ಎರಡನ್ನೂ ಒಟ್ಟಿಗೆ ತಂದುಕೊಂಡು ಯಶಸ್ವಿಯಾಯಿತು.
WhatsApp Group Join Now
Telegram Group Join Now
Share This Article