ಲಿಮ್ರ ರೇಷ್ಮೆ ಮತ್ತು ಹತ್ತಿ ಕೈಮಗ್ಗ
ಬಳ್ಳಾರಿ ಜೂನ್ 27 : ನಗರದ ಲಿಮ್ರ ರೇಷ್ಮೆ ಮತ್ತು ಹತ್ತಿ ಕೈಮಗ್ಗ
ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘಕ್ಕೆ ಓಬುಳಪತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಳೆದ 25 ವರ್ಷಗಳ ಹಿಂದೆ ನೋಂದಣಿಯಾದ ಸಂಘವು ಕೇವಲ 70 ಜನ ಸದಸ್ಯರೊಂದಿಗೆ ಕಂಟೋನ್ಮೆಂಟ್ ಪ್ರದೇಶದಲ್ಲಿ ಒಂದು ಚಿಕ್ಕ ಗೋಡನ್ ನಲ್ಲಿ ಆರಂಭಗೊಂಡು ಈಗ ಸುಮಾರು 686 ಜನ ಸದಸ್ಯರನ್ನು ಒಳಗೊಂಡಿದೆ. ಹಲವು ವರ್ಷಗಳ ಕಾಲ ನಡೆದು ಕಾಲಕ್ರಮೇಣ ನಿರ್ವಹಣೆ ಇಲ್ಲದೆ ಈ ಸಂಘ ಸ್ಥಗಿತಗೊಂಡಿತ್ತು.
ಈ ಸಂಘಕ್ಕೆ ಈಗ ರಾಟಲ ಮಂಜುನಾಥ್ ಮತ್ತು ವೀರಾಂಜನೇಯಯಲ್ಲಿ ಇವರು ಗಳ ಸಲಹೆ ಮತ್ತು ಸೂಚನೆಯ ಮೇರೆಗೆ ಓಬಳಪತಿ ಇವರನ್ನು ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡು ಸಂಘವನ್ನು ಮುನ್ನಡೆಸಲು ಮರುಚಾಲನೆ ನೀಡಿದ್ದಾರೆ.
ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಓಬಳಪತಿಯವರು ಈ ಸಂದರ್ಭದಲ್ಲಿ ಮಾತನಾಡಿ, ಸಂಘವು ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿತ್ತು ಈ ಸಂಘವನ್ನು ಇಂದು ನಾವೆಲ್ಲರೂ ಸೇರಿ ಮರುಚಲನೆ ನೀಡಿದ್ದೇವೆ, ಮತ್ತು ಈ ಸಹಕಾರ ಸಂಘದಿಂದ ಕೈಮಗ್ಗ ನೇಕಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಮತ್ತು ಕೈಮಗ್ಗ ನೇಕಾರರ ಮಹಾಮಂಡಳಿಯಿಂದ ದೊರೆಯುವ ಆರ್ಥಿಕ ನೆರವನ್ನು ಕಲ್ಪಿಸಿ ಸಂಘದಲ್ಲಿರುವ ಸದಸ್ಯರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುವುದಾಗಿ ಓಬುಳಪತಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಕ್ಕೆ ಕಾರ್ಯದರ್ಶಿಗಳನ್ನಾಗಿ ವೀರಾಂಜನೇಯಲು, ಉಪಾಧ್ಯಕ್ಷರನ್ನಾಗಿ ಕೆ ರಾಮಕೃಷ್ಣ ರೆಡ್ಡಿ ಮತ್ತು ನಿರ್ದೇಶಕರನ್ನಾಗಿ ಅರ್ಜುನ್ ರೆಡ್ಡಿ, ಸರಸ್ವತಿ, ಕಲಾವತಿ, ನಾಗೇಶ್ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.