‘ಡಾ. ಮಹೇಶ್ ಜೋಶಿಯನ್ನು ಅಮಾನತ್ತು ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ” ಆಂದೋಲನಕ್ಕೆ ಕರೆ

Ravi Talawar
‘ಡಾ. ಮಹೇಶ್ ಜೋಶಿಯನ್ನು ಅಮಾನತ್ತು ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ” ಆಂದೋಲನಕ್ಕೆ ಕರೆ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 39;
WhatsApp Group Join Now
Telegram Group Join Now
 ಬಳ್ಳಾರಿ ಜೂನ್ 20.  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಅವರು ಈಗಾಗಲೇ ಅನೇಕ ಆರ್ಥಿಕ ಅಶಿಸ್ತು ಮತ್ತು ಸರ್ವಾಧಿಕಾರದ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದ್ದು, ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿಯವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಿರಿಯ ಸಾಹಿತಿಗಳೂ ಆದಂತಹ ಡಾ. ಹಂಪನಾಗರಾಜಯ್ಯ ಅವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿರುವ ಕಾರಣಕ್ಕೆ ಅವರ ಬಗ್ಗೆ ಡಾ. ಮಹೇಶ್ ಜೋಶಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಸುಮಾರು 45 ವರ್ಷಗಳ ಹಿಂದಿನ ದೂರುಗಳನ್ನು ಇಟ್ಟುಕೊಂಡು ಪ್ರಸ್ತುತ ದ್ವೇಷದ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ?
ದಿನಾಂಕ: 24-04-2025ರಂದು ಬೆಂಗಳೂರಿನಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ದಿನಾಂಕ:25-04-2025 ರಂದು ಮಾನ್ಯ ಮುಖ್ಯಮಂತ್ರಿಗಳಿಗೆ ಬೆಂಗಳೂರಿನಲ್ಲಿ, ಹಾಗೂ ಅದಕ್ಕೂ ಮೊದಲು ದಿನಾಂಕ: 23-04-2025ರಂದು ಮಂಡ್ಯದ ನಾಗಮಂಗಲದ ದೊಡ್ಡಬಾಲದಲ್ಲಿ ಮನವಿ ಪತ್ರ ಸಲ್ಲಿಸಲಾಗಿತ್ತು. ಈ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಇದುವರೆವಿಗೂ ಮಾಹಿತಿ ಬಾರದಿರುವುದಕ್ಕೆ ವಿಷಾಧ ವ್ಯಕ್ತಪಡಿಸುತ್ತೇವೆ. ಹಾಗೂ ತತಕ್ಷಣ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು ವಿನಂತಿಸುತ್ತೇವೆ ಎಂದರು.
ದಿನಾಂಕ 30-04-2025 ರಂದು ಜೋಶಿಯವರು ಖಾಸಗಿ ವಾಹಿನಿಯಲ್ಲಿ ಮಾತನಾಡುತ್ತಾ 4 ಲಕ್ಷ ಜನ ಸದಸ್ಯರಿರುವ ಸಾಹಿತ್ಯ ಪರಿಷತ್ತಿನಲ್ಲಿ ಕೇವಲ ಯಾರೋ ನೂರು ಮಂದಿ ಹೋರಾಟ ಮಾಡಿದರೆ ನನ್ನನ್ನು ಏನೂ ಮಾಡೊಕ್ಕೆ ಆಗೋಲ್ಲ ಎಂಬ ಮಾತುಗಳನ್ನಾಡಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಿ ಉದ್ಧಟತನ ತೋರಿದ್ದಾರೆ. ಹಾಗೂ ಪ್ರಸ್ತಾಪಿತ ತಿದ್ದುಪಡಿ ಬೈಲಾದಲ್ಲಿ 20 ಅಂಶಗಳನ್ನು ತಿದ್ದುಪಡಿ ಮಾಡುತ್ತಿದ್ದು ಇದರಲ್ಲಿ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಇರುವ ಎಲ್ಲಾ ಅಧಿಕಾರಗಳನ್ನು ಮೊಟಕುಗೊಳಿಸಿ ಕೇಂದ್ರಕ್ಕೆ ಸರ್ವಾಧಿಕಾರವನ್ನು ಉಳಿಸಿಕೊಳ್ಳುವ ಹುನ್ನಾರ ಮಾಡಿರುವುದು ಕಂಡುಬಂದಿರುತ್ತದೆ. ಆದರೆ ಅವರ ಹೇಳಿಕೆಗೂ, ಪ್ರಸ್ತಾಪಿಸುತ್ತಿರುವ ಬೈಲಾ ತಿದ್ದುಪಡಿಗೂ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಎಂದರು.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ತಿಂಗಳು ಪೂರ್ಣಗೊಂಡಿದ್ದರೂ ಇದುವರೆಗೆ ಸ್ಮರಣಸಂಚಿಕೆ ಮುದ್ರಣಗೊಂಡು ಪ್ರಕಟಗೊಂಡಿರುವುದಿಲ್ಲ. ಈ ಬಗ್ಗೆ ಡಾ. ಮಹೇಶ್ ಜೋಶಿಯವರು ಪತ್ರಿಕಾ ಹೇಳಿಕೆ ನೀಡಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ
ಪರಿಷತ್ತಿನ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಯಾರ ಭಾವಚಿತ್ರ ಪ್ರಕಟಿಸಬೇಕು ಎಂಬ ಸ್ಪಷ್ಟತೆ ಇಲ್ಲ. ಇತ್ಯರ್ಥವಾದ ನಂತರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿರುತ್ತಾರೆ. ಆದರೆ ನ್ಯಾಯಾಲಯದ ಪ್ರಕರಣಕ್ಕೂ. ಸ್ಮರಣ ಸಂಚಿಕೆ ಬಿಡುಗಡೆಗೂ ಯಾವುದೇ ಸಂಬಂಧವಿರುವುದಿಲ್ಲ. ಆದುದರಿಂದ ಮಾನ್ಯ ಸ್ವಾಗತ ಸಮಿತಿಯ ಅಧ್ಯಕ್ಷರೂ ಮತ್ತು ಜಿಲ್ಲಾಧಿಕಾರಿಗಳು ಮುಂದಿನ ಹತ್ತು ದಿನಗಳೊಳಗಾಗಿ ಮುದ್ರಣ ಕಾರ್ಯ ಆರಂಭಿಸದಿದ್ದರೆ ಅದರ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡಿದ್ದ 30 ಕೋಟಿ ಅನುದಾನದಲ್ಲಿ 2.5 ಕೋಟಿಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಪಡೆದಿರುತ್ತದೆ. ಈಗಾಗಲೇ ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿಯು 27.50 ಕೋಟಿಗೆ ಕೆ.ಎಸ್.ಎಂ.ಸಿ. & ಎ ಅಡಿಯಲ್ಲಿ ವೆಚ್ಚ ಮಾಡಿ ಲೆಕ್ಕ ಪತ್ರಗಳನ್ನು ನೀಡಿರುತ್ತಾರೆ. ಆದರೆ ಮಹೇಶ್ ಜೋಶಿಯವರು 2.5 ಕೋಟಿಗೆ ಇದುವರೆಗೂ ಲೆಕ್ಕ ನೀಡದೆ. ಇನ್ನೂ 6 ತಿಂಗಳ ಸಮಯವಿದೆ. ನಂತರ ಲೆಕ್ಕ ಕೊಡುತ್ತೇನೆಂದು ಹೇಳುವ ಮೂಲಕ ಉದ್ದಟತನ ಮೆರೆದಿರುತ್ತಾರೆ.
2023-24ನೇ ಸಾಲಿನ ವಾರ್ಷಿಕ ವರದಿಯಲ್ಲಿ ಮತ್ತು ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ, ಕಾಮಗಾರಿಗಳ ಬಗ್ಗೆ, ಕಟ್ಟಡ ನವೀಕರಣದ ಬಗ್ಗೆ ಇನ್ನಿತರ ಲೋಪದೋಷಗಳನ್ನು ಈಗಾಗಲೆ ಎತ್ತಿ ಹಿಡಿದಿದ್ದಾರೆ. ಇದಕ್ಕೆ ಅಧ್ಯಕ್ಷರು ಸರಿಯಾದ ಉತ್ತರಗಳನ್ನು ನೀಡದೆ ಮುಂದೆ ಸರಿಪಡಿಸಿಕೊಳ್ಳುತ್ತೇನೆ ಎಂಬಂತಹ ತಾತ್ಸಾರದ ಮಾತುಗಳನ್ನೇ ಆಡುತ್ತಾ ಬಂದಿದ್ದಾರೆ. ಹಾಗಾಗಿ ಅವ್ಯವಹಾರಗಳು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ನಾವು ನಿಖರವಾದ ಮಾಹಿತಿ ತೋರಬೇಕು ಎಂದು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ.
ಉದಾಹರಣೆಗೆ, ಅವರೇ ಸಿದ್ದಪಡಿಸಿರುವ ಜಮಾ ಖರ್ಚಿನ ವಿವರದಲ್ಲಿ ಲೋಪ ದೋಷಗಳಿದ್ದು ಆರ್ಥಿಕ ಅಶಿಸ್ತು ಎದ್ದು ಕಾಣುತ್ತಿದೆ. ಅದ್ಯಕ್ಷರ ವೇತನ – ರೂ. 4,20.000/-, ದಿನಭತ್ಯೆ ರೂ. 7,62,329/-, ಪ್ರಯಾಣ ವೆಚ್ಚ – ರೂ 6,70.267/-, ವಾಹನ ನಿರ್ವಹಣೆ ವೆಚ್ಚ – ರೂ. 93.319/-, ಮನೆ ದಿನಪತ್ರಿಕೆಗಳ ವೆಚ್ಚ – ರೂ.33,419/-. ದೂರವಾಣಿ ಜಂಗಮವಾಣಿಗಳ ವೆಚ್ಚ: . 43,519/-, ಇಂಧನ ವೆಚ್ಚ – ರೂ.18,310/-, ಒಟ್ಟು ರೂ.22, 06,553/- ವೆಚ್ಚವನ್ನು ಪಡೆದಿರುತ್ತಾರೆ. ಆದರೆ ಇದುವರೆಗೂ ಸಾಹಿತ್ಯ ಪರಿಷತ್ತಿನ 108 ವರ್ಷಗಳ ಇತಿಹಾಸದಲ್ಲಿ ಯಾರು ಕೂಡ ದಿನಭತ್ಯೆ, ಪ್ರಯಾಣ ಭತ್ಯೆ, ವೇತನ ಪಡೆಯದೆ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ.
ಕ.ಸಾ.ಪ ಆಜೀವ ಸದಸ್ಯತ್ವ ಪಡೆದು ಕನ್ನಡ ಸೇವೆ ಮಾಡುತ್ತಿರುವ ಸದಸ್ಯರನ್ನು ಹಾಗೂ ಚುನಾಯಿತ ಅಧ್ಯಕ್ಷರನ್ನು ಷೋಕಾಸ್ ನೋಟೀಸ್ ನೀಡಿ ಸದಸ್ಯತ್ವ ರದ್ದುಪಡಿಸುತ್ತಿರುವುದು ಪ್ರಜಾಪ್ರಭುತ್ವ ಮಾದರಿಗೆ ಘೋರ ಅನ್ಯಾಯವಸಗಿದಂತಾಗುತ್ತಿದೆ. ತಕ್ಷಣ ಅಮಾನತ್ತು ಆದೇಶವನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇವೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಟಪಾಲು ವಿಭಾಗದಲ್ಲಿ ಖುದ್ದಾಗಿ ಭೇಟಿ ಮಾಡಿ ಟಪಾಲುಗಳನ್ನು ನೀಡಿದರೆ ಅದನ್ನು ಸ್ವೀಕರಿಸುವುದಿಲ್ಲ. ಅದರ ಬದಲು ಒಂದು ಸ್ವೀಕೃತಿಯನ್ನು ನೀಡುತ್ತಾರೆ. ಆ ಸ್ವೀಕೃತಿಯಲ್ಲಿ ಲಕೋಟೆಯೊಳಗೆ ಏನಿದೆ ಎಂಬುದರ ಮಾಹಿತಿ ತಿಳಿದಿರುವುದಿಲ್ಲ ಎಂದು ನಮೂದಿಸಿರುತ್ತಾರೆ. ಸರ್ಕಾರ ಮತ್ತು ಇತರೆ ಯಾವುದೇ ಇಲಾಖೆ ಮತ್ತು ಸಂಘ ಸಂಸ್ಥೆಗಳಿಗೆ ನಾವು ಮುದ್ದಾಂ ಪತ್ರವನ್ನು ನೀಡಿದರೆ ಅದಕ್ಕೆ ಸ್ವೀಕೃತಿಯ ಸೀಲ್ ಹಾಕಿ ಕೊಡುವ ಪರಿಪಾಠವಿದೆ. ಆದರೆ ಕ.ಸಾ.ಪ. ಕಛೇರಿಯಲ್ಲಿ ಅನ್ವಯಿಸುತ್ತಿಲ್ಲ ಯಾಕೆ? ಈ
ರೀತಿಯ ಸ್ವೀಕೃತಿ ನೀಡುವುದು ಎಷ್ಟು ಸರಿ? ಇದರ ಉದ್ದೇಶ ಲಕೋಟೆಯೊಳಗಿನ ಪತ್ರವನ್ನು ಮುಚ್ಚಿಡುವ ಅಥವಾ ಖಾಲಿ ಇತ್ತೆಂದು ಹೇಳುವ ಅವಕಾಶವನ್ನು ಉಳಿಸಿಕೊಳ್ಳುವ ದುರುದ್ದೇಶವಾಗಿರುತ್ತದೆ.
ಈಗಾಗಲೇ 2022ನೇ ಸಾಲಿನಲ್ಲಿ ಸಮಗ್ರ ಬೈಲಾ ತಿದ್ದುಪಡಿ ಮಾಡಿ, ಕರ್ನಾಟಕ ಸೊಸೈಟಿಗಳ ರಿಜಿಸ್ಟರ್ ಸಂಖ್ಯೆ ಡಿಆರ್‌ಜಿ 2/ತಿದ್ದುಪಡಿ/03/2022-23 ದಿನಾಂಕ: 30-06-2022ರಲ್ಲಿ ಬೆಂಗಳೂರು ಮಹಾನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೂಲ ದಾವೆ ಸಂಖ್ಯೆ : ಓ ಎಸ್ 3029/2022 ರಲ್ಲಿ ದಾಖಲಾಗಿರುವ ದಾವೆಯ ತೀರ್ಪಿಗೆ ಒಳಪಟ್ಟು ಅನುಮೋದಿಸಿ ನೋಂದಾಯಿಸಿದೆ. ಎಂದು ತಿಳಿಸಿರುತ್ತಾರೆ. ಈ ಬೈಲಾ ತಿದ್ದುಪಡಿ ಪ್ರಕಾರ ಹಾಲಿ ಅಧ್ಯಕ್ಷರು ವ್ಯವಹಾರವನ್ನು ನಡೆಸುತ್ತಿದ್ದು ಮುಂದೆ ನ್ಯಾಯಾಲಯದ ತೀರ್ಮ ಈ ಸಮಗ್ರ ಬೈಲಾ ತಿದ್ದುಪಡಿ ವಿರುದ್ಧವಾಗಿ ಬಂದಲ್ಲಿ ಇದುವರೆವಿಗೆ ತಿದ್ದುಪಡಿ ಬೈಲಾ ಪ್ರಕಾರ ನಡೆಸಿಕೊಂಡು ಬಂದಿರುವ ಅಧ್ಯಕ್ಷರ ಕಾರ್ಯಗಳಿಗೆ ಯಾರು ಜವಾಬ್ದಾರರಾಗುತ್ತಾರೆ?
ಈ ಸಂಧರ್ಭದಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ವಸುಂದರಾ ಭೂಪತಿ, ಮಂಡ್ಯ ಕಾಸಪ ಮಾಜಿ ಅಧ್ಯಕ್ಷ ಮೀರಾ ಶಿವಲಿಂಗಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೋ.ಎಸ್.ಜಿ.ಸಿದ್ದರಾಮಯ್ಯ, ಕನ್ನಡಪರ ಸಂಘಟನೆಗಳ ಮುಖಂಡರಾದ ಜಿ.ಜಾಣಗೇರೆ ವೆಂಕಟರಾಮಯ್ಯ, ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡ, ಮಂಡ್ಯ ರೈತ ಹೋರಾಟಗಾರ್ತಿ ಸುನಂದ ಜಯರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article