ಧರ್ಮ‍ಸ್ಥಳ ವಿರುದ್ಧ ಅಪಪ್ರಚಾರಕ್ಕಾಗಿ  ಸಮೀರ್, ಚಂದನ್ ಗೌಡ ಮತ್ತು ಅಭಿಗೆ ಫಂಡಿಂಗ್; ಯುಟ್ಯೂಬರ್‌ ಸುಮಂತ್‌ ಗಂಭೀರ ಆರೋಪ

Ravi Talawar
ಧರ್ಮ‍ಸ್ಥಳ ವಿರುದ್ಧ ಅಪಪ್ರಚಾರಕ್ಕಾಗಿ  ಸಮೀರ್, ಚಂದನ್ ಗೌಡ ಮತ್ತು ಅಭಿಗೆ ಫಂಡಿಂಗ್; ಯುಟ್ಯೂಬರ್‌ ಸುಮಂತ್‌ ಗಂಭೀರ ಆರೋಪ
WhatsApp Group Join Now
Telegram Group Join Now

ಬೆಂಗಳೂರು:ಮಂಡ್ಯ ಮೂಲದ ಯೂಟ್ಯೂಬರ್ ಸುಮಂತ್ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ತಾನೇ ಸಾಕ್ಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆತನಗೂ ಈ ಷಡ್ಯಂತ್ರವನ್ನು ಉತ್ತೇಜಿಸುವಂತಹ ಆಫರ್ ಬಂದಿತ್ತು ಎಂದು ಆತ ಬಹಿರಂಗಪಡಿಸಿದ್ದಾನೆಸುಮಂತ್‌ನ ಪ್ರಕಾರಯೂಟ್ಯೂಬರ್‌ಗಳಾದ ಸಮೀರ್ಚಂದನ್ ಗೌಡ ಮತ್ತು ಅಭಿಗೆ ಫಂಡಿಂಗ್ ಒದಗಿಸಲಾಗಿದೆ.

ಈ ತಂಡವು ಧರ್ಮಸ್ಥಳದ ವಿರುದ್ಧ ತಪ್ಪು ಮಾಹಿತಿಯನ್ನು ಹರಡಲು ವೀಡಿಯೊಗಳನ್ನು ತಯಾರಿಸಿ ಟ್ರೋಲ್ ಮಾಡುವ ಕೆಲಸಕ್ಕೆ ಆರ್ಥಿಕ ಬೆಂಬಲ ಪಡೆದಿದೆ ಎಂದು ಆರೋಪಿಸಲಾಗಿದೆಸುಮಂತ್, ಈ ಬಗ್ಗೆ ಚರ್ಚಿಸಲು ಜ್ಯೂಸ್ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾಗಿ ತಿಳಿಸಿದ್ದಾರೆಆದರೆತಾನು ಈ ಷಡ್ಯಂತ್ರದಲ್ಲಿ ಭಾಗಿಯಾಗಲು ಒಪ್ಪದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸುಮಂತ್‌ನ ಹೇಳಿಕೆಯ ಪ್ರಕಾರ, ಈ ಷಡ್ಯಂತ್ರವು ಎರಡು ವರ್ಷಗಳ ಹಿಂದೆ ಸೌಜನ್ಯ ಹತ್ಯೆ ಪ್ರಕರಣದ ಹೋರಾಟದ ಹೆಸರಿನಲ್ಲಿ ಆರಂಭವಾಗಿತ್ತು. 2012ರಲ್ಲಿ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವು ಇನ್ನೂ ಬಗೆಹರಿಯದೆ ಉಳಿದಿದೆ.

ಪ್ರಕರಣವನ್ನು ಕೇಂದ್ರೀಕರಿಸಿಕೆಲವು ಗುಂಪುಗಳು ಧರ್ಮಸ್ಥಳದ ದೇವಾಲಯದ ಆಡಳಿತಗಾರರ ವಿರುದ್ಧ ಆರೋಪಗಳನ್ನು ಮಾಡಿಖ್ಯಾತಿಗೆ ಕಳಂಕ ತರುವ ಯತ್ನ ಮಾಡಿವೆ ಎಂದು ಆರೋಪಿಸಲಾಗಿದೆಸುಮಂತ್, ಈ ಷಡ್ಯಂತ್ರದ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್‌ರಂತಹ ವ್ಯಕ್ತಿಗಳಿದ್ದಾರೆ ಎಂದು ಆರೋಪಿಸಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ರಂತಹ ಪ್ರಮುಖ ವ್ಯಕ್ತಿಗಳೇ ಸಮೀರ್‌ನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕರಣ ದಾಖಲಾದಾಗ ಆತನ ಬೆಂಬಲಕ್ಕೆ ನಿಂತಿದ್ದರು ಎಂದು ಆರೋಪಿಸಿ ಸುಮಂತ್ ಹೇಳಿಕೆ ನೀಡಿದ್ದಾರೆ.

ಸುಮಂತ್‌ನ ಹೇಳಿಕೆಯ ಪ್ರಕಾರಚಂದನ್ ಗೌಡ ಎಂಬ ಯೂಟ್ಯೂಬರ್ಲೋಕಸಭಾ ಚುನಾವಣೆಯ ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದರೂಈಗ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಬಟ್ಟೆ ಅಂಗಡಿ ತೆರೆದಿದ್ದಾನೆ. ಈ ಆರ್ಥಿಕ ಏರಿಕೆಯ ಹಿಂದೆ ಫಂಡಿಂಗ್‌ನ ಪಾತ್ರವಿದೆ ಎಂದು ಸುಮಂತ್ ಆರೋಪಿಸಿದ್ದಾರೆ. ಈ ಫಂಡಿಂಗ್‌ನ ಮೂಲವನ್ನು ತನಿಖೆ ಮಾಡಬೇಕೆಂದು ಆತ ಒತ್ತಾಯಿಸಿದ್ದಾನೆ.

 

WhatsApp Group Join Now
Telegram Group Join Now
Share This Article