ಹುಕ್ಕೇರಿ. ತಾಲೂಕಿನ ಯಮಕನಮರ್ಡಿ ಕ್ಷೇತ್ರದ ಕರಗುಪ್ಪಿ ಮತ್ತು ಯಲ್ಲಾಪುರ ಗ್ರಾಮದಲ್ಲಿ ಬುಧವಾರ ಸುರಿದು ಬಾರಿ ಪ್ರಮಾಣದ ಗಾಳಿ ಮಳೆಯಿಂದಾಗಿ ಸುಕ್ಷೇತ್ರ ಸೋಮೇಶ್ವರ ದೇವಸ್ಥಾನದ ನೂತನವಾಗಿ ನಿರ್ಮಿಸಿರುವ ದಾಸೋಹ ಕೊಠಡಿಯ ಮೇಲ್ಚಾವಣಿ ಗಾಳಿಗೆ ಸುಮಾರು 200 ಮೀಟರ್ ಅಂತರದಿಂದ ರಸ್ತೆಯಲ್ಲಿ ಬಿದ್ದಿದ್ದು ಮತ್ತು ಹಲವು ಮನೆಗಳ ಮೇಲೆ ಗಿಡಮರಗಳು ಬಿದ್ದು ಮನೆಯ ಮೇಲ್ಚಾವಣಿ ಮುರಿದು ಹಾನಿಗೆಡಾಗಿದೆ.ಆದರೆ ಯಾವುದೇ ಪ್ರಾಣಪಾಯವಾಗಿಲ್ಲ. ಈ ಸಂದರ್ಭದಲ್ಲಿ ಹಾನಿಗೆಡಾದ ಮನೆಗಳನ್ನು ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯಿತಿ ಅಧ್ಯಕ್ಷರು ಊರಿನ ಪ್ರಮುಖರು ಭೇಟಿ ನೀಡಿ ಪರಿಶೀಲಿಸಿದರು.