ಸಂಶೋಧನಾ ಕೃತಿ ಸ್ವತಂತ್ಯ್ರ ಸೇನಾನಿ ಪದ್ಮಾವತಿ ದೇಸಾಯಿ ಗ್ರಂಥದ ಲೋಕಾರ್ಪಣೆ ನಾಳೆ

Pratibha Boi
ಸಂಶೋಧನಾ ಕೃತಿ ಸ್ವತಂತ್ಯ್ರ ಸೇನಾನಿ ಪದ್ಮಾವತಿ ದೇಸಾಯಿ ಗ್ರಂಥದ ಲೋಕಾರ್ಪಣೆ ನಾಳೆ
WhatsApp Group Join Now
Telegram Group Join Now

ಜಮಖಂಡಿ;ನಗರದ ಹಿರಿಯ ನ್ಯಾಯವಾದಿ, ಸಾಹಿತಿ ಡಾ.ತಾತಾಸಾಹೇಬ ಬಾಂಗಿ ಅವರ ಸಂಶೋಧನಾ ಕೃತಿ ಸ್ವತಂತ್ಯ್ರ ಸೇನಾನಿ ಪದ್ಮಾವತಿ.ವಾಮನರಾವ ದೇಸಾಯಿ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ನಗರದ ಬಸವ ಭವನದಲ್ಲಿ ಭಾನುವಾರ ದಿ,29 ರಂದು ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದಮುತ್ಯಾ ಅವರ ಸಾನಿಧ್ಯ ವಹಿಸುವರು, ಶಾಸಕ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸುವರು. ಸ್ವತಂತ್ಯ್ರಸೇನಾನಿ ಮೊಮ್ಮಗ ಮನೋಜ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ವಿಶ್ರಾಂತ ಕುಲಪತಿ ಮೀನಾ ಚಂದಾವರಕರ ಗ್ರಂಥ ಬಿಡುಗಡೆ ಗೊಳಿಸುವರು. ಸಾಹಿತಿ ಡಾ.ವೈ.ಎಂ,ಯಾಕೊಳ್ಳಿ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಸಾಹಿತ್ಯ ಅಕಾಡಮಿ ಸದಸ್ಯ ಮಹಾದೇವ ಬಸರಕೋಡ, ಜಿಲ್ಲಾನೊಂದಣಿ ಅಧಿಕಾರಿ ಸವಿತಾಲಕ್ಷ್ಮೀ ಬೆಳಗಲಿ, ನಿರ್ದೇಶಕ ಡಾ.ಎ.ಬಿ.ವಗ್ಗರ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕಾಡು ಮಾಳಿ, ಶ್ರೀಶೈಲ ಮೊಟಗಿ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ದಾಮೋದರ ಹುಲ್ಯಾಳಕರ, ಡಾ ಪ್ರಕಾಶ ಹೊಸವಾಡ ಅವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಗ್ರಂಥದ ಲೇಖಕ ಡಾ.ತಾತಾಸಾಹೆಬ ಬಾಂಗಿ ಮಾತನಾಡಿ, ಇತಹಾಸದ ಪುಟದಲ್ಲಿ ಮುಂಚೋಣಿಯಲ್ಲಿರಬೇಲಾಗಿದ್ದ ಸ್ವತಂತ್ಯ್ರ ಸೇನಾನಿ ಪದ್ಮಾವತಿಬಾಯಿ ದೇಸಾಯಿ ಅವರು ನಿರ್ಲಕ್ಷಕ್ಕೊಳಗಾಗಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಮಾಡಿದ ಹೋರಾಟ ಸ್ವತಂತ್ಯ್ರ ಹೋರಾಟದಲ್ಲಿ ಧುಮುಕಿ ಜೈಲು ಶಿಕ್ಷೆ ಅನುಭವಿಸಿದ್ದರು, ಜಮಖಂಡಿ ಸಂಸ್ಥಾನದ ಏಕೈಕ ಮಹಿಳಾ ಸದಸ್ಯ (ಶಾಸಕಿ) ಯಾಗಿದ್ದರು. 1924ರಲ್ಲಿ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. 1974ರಲ್ಲಿ ಇಂದಿರಾಗಾಂಧಿ ತಾಮ್ರಪತ್ರನೀಡಿ ಗೌರವಿಸಿ ದ್ದಾರೆ. ಜಮಖಂಡಿಯವರೇ ಆದ ಪದ್ಮಾವತಿ ದೇಸಾಯಿ ಅವರ ಕುರಿತಾದ ಸಂಶೋಧನಾ ಕೃತಿ ರಚಿಸಿದ್ದು ನಮ್ಮ ನಾಡಿಗೆ ಅವರ ಬಗ್ಗೆ ಪರಿಚಯಿಸುವದೇ ಕೃತಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಬಸವರಾಜ ನಾಗಮೋತಿ, ಪ್ರಾಚಾರ್ಯ ಮಹಂತೇಶ ನರಸನ ಗೌಡರ, ಶಿವಾನಂದ ಸಾತಿಹಾಳ, ಶ್ರೀಪಾದ ಹೊನವಾಡ, ಮುಂತಾದವರಿದ್ದರು.

WhatsApp Group Join Now
Telegram Group Join Now
Share This Article