ಮೂಡಲಗಿ: ಪಟ್ಟಣದಲ್ಲಿ ಹಲವಾರು ಅಂಗಡಿ ಮುಂಗಟ್ಟುಗಳು, ಆಸ್ಪತ್ರೆ, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕಗಳು ಮೇಲ್ಭಾಗದಲ್ಲಿ ಹೊಂದಿಲ್ಲ ಕಾರಣ ಅನ್ಯ ಭಾ?ಗೆ ಮೊದಲ ಆದ್ಯತೆ ನೀಡದೇ ಶೇ ೬೦ ರ? ದಪ್ಪ ಅಕ್ಷರಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿ ಕನ್ನಡ ಭಾ?ಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಸರ್ಕಾರ ಈಗಾಗಲೇ ಶೇಕಡಾ ಅರವತ್ತರ? ಕನ್ನಡ ಭಾ? ಹೊಂದಿದ ನಾಮಫಲಕ ಕಡ್ಡಾಯವಾಗಿ ಇರಲೇಬೇಕು ಎಂದು ಆದೇಶವಿದ್ದರೂ ಕೂಡ ಅನ್ಯ ಭಾ?ಯ ನಾಮ ಫಲಕಗಳನ್ನು ಬಳಸುತ್ತಿದ್ದು ಈ ಮುಂಚೆ ಸಂಘಟನೆಯಿಂದ ಪಟ್ಟಣದ ಅಂಗಡಿ ಮುಂಗಟ್ಟುಗಾರರಿಗೆ ತಿಳಿ ಹೇಳಲಾಗಿತ್ತು ಆದರೂ ಇಲ್ಲಿಯವರೆಗೂ ಕನ್ನಡ ಭಾ?ಗೆ ಅ?ನೂ ಮಾನ್ಯತೆ ನೀಡದೇ ಕನ್ನಡ ಭಾ?ಗೆ ಅವಮಾನಿಸುವಂತೆ ಮೇಲ್ಭಾಗದಲ್ಲಿ ಹೊಂದಿರುವ ಅನ್ಯ ಭಾ?ಯ ನಾಮ ಫಲಕಗಳನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂಧರ್ಭದಲ್ಲಿ ತಾಲೂಕಾ ಅಧ್ಯಕ್ಷ ಸುನಿಲ್ ಗಸ್ತಿ, ಉಪಾಧ್ಯಕ್ಷ ಸುಭಾ? ವಾಘಮೋಡೆ ಘಟಕ ಉಪಾಧ್ಯಕ್ಷ ಹನುಮಂತ ಪೂಜಾರಿ, ಸದಸ್ಯರಾದ ಬಸವರಾಜ ಗಸ್ತಿ, ಸುನೀಲ್ ಕವಟಕೊಪ್ಪ ಮುಖಂಡರಾದ ಈರಪ್ಪ ಢವಳೇಶ್ವರ, ನಂಜುಂಡಿ ಸರ್ವಿ, ಸುರೇಶ ಸಣ್ಣಕ್ಕಿ, ಅಸ್ಲಂ ಪೆಂಡಾರಿ, ರಾಜು ಪೈಲ್ವಾನ್ ಸೇರಿದಂತೆ ಅನೇಕರು ಇದ್ದರು.


