ಬೆಳಗಾವಿ: ಅಥಣಿ ಪಟ್ಟಣದ ಖ್ಯಾತ ಸಾಹಿತಿ, ವಿಮರ್ಶಕ, ಪ್ರಗತಿಪರ ವಿಚಾರವಾದಿ, ಅನುವಾದಕ ಡಾ. ಜೆ. ಪಿ ದೊಡಮನಿ ಅವರ ಅಭಿನಂದನೆ ಹಾಗೂ ಅವರ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭವನ್ನು ಬರುವ ರವಿವಾರ ದಿ. 15 ರಂದು ಮುಂಜಾನೆ 9:30 ಗಂಟೆಗೆ ಮೋಟಗಿ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಹಿರಿಯ ಸದಸ್ಯೆ, ಅಥಣಿ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ. ಪ್ರಿಯಂವಧಾ ಹುಲಗಬಾಳಿ ಹೇಳಿದರು.
ಅವರು ಗುರುವಾರ ಅಥಣಿ ಪಟ್ಟಣದಲ್ಲಿ ಅಭಿನಂದನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಡಾ. ಜೆ.ಪಿ ದೊಡ್ಡಮನಿ ಅವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಅಥಣಿ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.