ಬೆಳ್ಳಿ ಗದೆ, ಬಸವ ಕೇಸರಿ ಬಿರುದು ತನ್ನದಾಗಿಸಿಕೊಂಡ ಮುಗಳಖೋದ ಜಗ ಜಟ್ಟಿ ರವಿ ಗೋಳಸಂಗಿ

Ravi Talawar
ಬೆಳ್ಳಿ ಗದೆ, ಬಸವ ಕೇಸರಿ ಬಿರುದು ತನ್ನದಾಗಿಸಿಕೊಂಡ ಮುಗಳಖೋದ ಜಗ ಜಟ್ಟಿ ರವಿ ಗೋಳಸಂಗಿ
WhatsApp Group Join Now
Telegram Group Join Now
ಮುಗಳಖೋಡ,20: ಪಟ್ಟಣದ ರೈತ ಭೀಮಪ್ಪ ಗೋಳಸಂಗಿಯವರ ಪುತ್ರ ರವಿ ಗೋಳಸಂಗಿ ಶನಿವಾರ ದಂದು ಕಲಬುರ್ಗಿಯ ದೇಗಾಂವದಲ್ಲಿ
ನಡೆದ ಶ್ರೀ ಬಸವೇಶ್ವರ ಜಾತ್ರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಜಂಗಿ ನಿಕಾಲಿ ಕುಸ್ತಿಯಲ್ಲಿ ಜಗ ಜಟ್ಟಿ ಯೋಡನೆ ಸೆನಸಾಡಿ ಗೆಲುವು ತನ್ನದಾಗಿಸಿಕೊಂಡು ಬಸವ ಕೇಸರಿ ಬಿರುದು ಜೋತೆ ಒಂದುವರೆ ಕಿಲೋ ಬೆಳ್ಳಿ ಗದೆ ಗೆದ್ದ ರವಿಯನ್ನು ಅವರ ಅಭಿಮಾನಿಗಳು ಹಾಗೂ ಸಮಸ್ತ ಪಟ್ಟಣದ ನಾಗರೀಕರು ಪುರಸಭೆ ಹತ್ತಿರದಲ್ಲಿರುವ ಕುಸ್ತಿ ಶಾಲೆಯಿಂದ ಗಜಾನನ ಮಂದಿರದ ಮಾರ್ಗವಾಗಿ ರ್ಕ್ಷೇತ್ರಾಧಿಪತಿ  ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ ಭೃಹ್ನ ಮಠದ ವರೆಗೆ ಭವ್ಯ ಮೆರವಣಿಗೆ ಮಾಡಲಾಯಿತು. ನಂತರ ಎಲ್ಲರೂ ಶ್ರೀ ಯಲ್ಲಾಲಿಂಗೇಶ್ವರರ ಗದ್ದುಗೆ ದರ್ಶನ ಆರ್ಶೀವಾದ ಪಡೆದು ಸಿಹಿ ಹಂಚಿ ಸಂಭ್ರಮಿಸಿದರು.
WhatsApp Group Join Now
Telegram Group Join Now
Share This Article