ರಾಯಬಾಗ: ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಹಬ್ಬವನ್ನು ಗುರುವಾರ ಆಚರಿಸಲಾಯಿತು. ಕೇಂದ್ರದ ಮುಖ್ಯಸ್ಥೆ ಪುಷ್ಪ ಅಕ್ಕನವರು ಕೇಂದ್ರಕ್ಕೆ ಆಗಮಿಸಿದ ಸಹೋದರರಿಗೆ ರಾಖಿ ಕಟ್ಟಿ, ಸಿಹಿ ಹಂಚಿ ಮಾತನಾಡಿ ಇಂದಿನ ಕಂಪ್ಯೂಟರ್ ಯುಗದಲ್ಲಿ ಆಧ್ಯಾತ್ಮ ಧ್ಯಾನ ಯೋಗ ಎಲ್ಲವೂ ಈಗಿನ ಯುವ ಪೀಳಿಗೆಗೆ ಬೇಡವಾದಂತಾಗಿದೆ ಅದನ್ನು ನಾವು ನೀವೆಲ್ಲರೂ ಕೂಡಿಕೊಂಡು ಬಾಬಾ ಅವರ ಕೃಪ ಆಶೀರ್ವಾದದಿಂದ ಕಾಪಾಡಿಕೊಂಡು ಹೋಗೋಣ ಎಂದರು ಈ ಸಂದರ್ಭದಲ್ಲಿ. ನಿವೃತ್ತ ಬಿಇಒ ಎಚ್.ಎ.ಭಜಂತ್ರಿ, ಎ ಬಿ . ಮಂಗ ಸೂಳ ವಕೀಲರು ಬಿ.ಎಮ್.ಮಾಳಿ, ಡಿ.ಎಲ್.ಮಿರ್ಜೆ, ಲಗಮಣ್ಣ ಪಾಟೀಲ ಪತ್ರಕರ್ತರಾದ, ರಾಜು ತಳವಾರ ಸುಧೀರ್ ಕಳ್ಳಿ ಅಬ್ಬಾಸ್ ಲತಿಪ್ನವರ್ ಭೀಮಪ್ಪ ಕಿಚಡೆ ಸಂಭಾಜಿ ಚೌಹಾನ್. ಹಾಗೂ ಅನೇಕ ಅಕ್ಕತಂಗಿಯರು ಅಣ್ಣ ತಮ್ಮಂದಿರು ಇದ್ದರು.