ಬೆಂಗಳೂರು, ಜೂನ್ 30: ಕರ್ನಾಟಕದಾದ್ಯಂತ ಮುಂಗಾರು ಬಿಡುವು ಪಡೆದಿದೆ. ಆಗಾಗ ಒಂದೊಂದು ಮಳೆಯಾಗುತ್ತಿದ್ದು, ನಿರಂತರವಾಗಿ ಸುರಿಯುತ್ತಿಲ್ಲ. ಜುಲೈ 3ರ ಬಳಿಕ ಮತ್ತೆ ರಾಜ್ಯಾದ್ಯಂತ ಮಳೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಂಟವಾಳ, ಕ್ಯಾಸಲ್ರಾಕ್, ಭಾಗಮಂಡಲ, ಆಗುಂಬೆ, ಮಾಣಿ, ಕದ್ರಾ, ಪುತ್ತೂರು, ಮೂಡುಬಿದಿರೆ, ಶಕ್ತಿನಗರ, ಮಂಗಳೂರು, ಕಾರ್ಕಳ, ಬೆಳ್ತಂಗಡಿ, ಗೇರುಸೊಪ್ಪ, ಸಿದ್ದಾಪುರ, ಲೋಂಡಾ, ಯಲ್ಲಾಪುರ, ಕೊಟ್ಟಿಗೆಹಾರ, ನಾಪೋಕ್ಲು, ಕಮ್ಮರಡಿ, ಶೃಂಗೇರಿ, ಕಳಸ, ಸುಳ್ಯ, ಕಾರವಾರ, ಸೋಮವಾರಪೇಟೆ, ಪೊನ್ನಂಪೇಟೆ, ಜಯಪುರ, ಕುಂದಾಪುರ, ಜೋಯ್ಡಾ, ಶಿರಾಲಿ, ಹಳಿಯಾಳ, ಕುಮಟಾ, ಖಾನಾಪುರದಲ್ಲಿ ಮಳೆಯಾಗಿದೆ.