ಸಿಲಿಕಾನ್​ ಸಿಟಿ ಜನರಿಗೆ ಮಳೆರಾಯನ ಸಿಂಚನ!

Ravi Talawar
ಸಿಲಿಕಾನ್​ ಸಿಟಿ ಜನರಿಗೆ ಮಳೆರಾಯನ ಸಿಂಚನ!
WhatsApp Group Join Now
Telegram Group Join Now

ಬೆಂಗಳೂರು, ಮೇ 03: ಬಿಸಿ ತಾಪಮಾನದಿಂದ ಕಂಗಾಲಾಗಿದ್ದ ಸಿಲಿಕಾನ್​ ಸಿಟಿ ಜನರಿಗೆ ನಿನ್ನೆ ಮಳೆರಾಯನ ಸಿಂಚನವಾಗಿದೆ. ಆ ಮೂಲಕ ಸಿಟಿ ಜನರು ಮೊದಲ ಮಳೆಯನ್ನು ಸಂಭ್ರಮಿಸಿದ್ದಾರೆ. ನಗರದ ಹಲವೆಡೆ ನಿನ್ನೆ ಜೋರು ಮಳೆ  ಆಗಿದೆ. ಇಂದು ಕೂಡ ನಗರದೆಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಇದೀಗ ಗುಡುಗು, ಮಿಂಚಿ ಸಹಿತ ಮಳೆ  ಆಗಿದೆ. ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್ ಸೇರಿದಂತೆ ಕೆ.ಆರ್‌ಪುರಂ ವೈಟ್ ಫಿಲ್ಡ್, ಬೆಂಗಳೂರು ದಕ್ಷಿಣ ಭಾಗದಲ್ಲಿ ಮೋಡ ಕವಿದ ವಾತಾವರಣದ ಜೊತೆ ಮಳೆ  ಆಗಿದೆ.

ನಗರದ ಕೆ.ಆರ್‌ಪುರಂ ವೈಟ್ ಫಿಲ್ಡ್, ವಿಧಾನ ಸೌಧ.ಚಾಲುಕ್ಯ ಸರ್ಕಲ್. ಶಿವಾನನಂದ ಸರ್ಕಲ್ ,ಮೈಸೂರು ಬ್ಯಾಂಕ್ ಮೆಜೆಸ್ಟಿಕ್ ಸೇರಿದಂತೆ  ಬೆಂಗಳೂರು ದಕ್ಷಿಣ ಭಾಗದಲ್ಲಿ ಭರ್ಜರಿ ಮಳೆಯಾಗಿದೆ.

ನಿನ್ನೆ ಹಾಗೂ ಇವತ್ತು ನಗರದಲ್ಲಿ ಗರಿಷ್ಟ 38ಉಷ್ಣಾಂಶ ಇದ್ದು, ಬೆಳಿಗ್ಗೆಯಿಂದ ಬಿಸಿ ಹಾಗೂ ಆರ್ದ್ರ ವಾತಾವರಣವಿತ್ತು. ಮಳೆ ಹಿನ್ನಲೆ ಹಾಟ್ ಸಿಟಿ ಕೂಲ್ ಕೂಲ್ ಆಗಿದೆ. ಇನ್ನು ಕೆ.ಆರ್ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಅದ್ವಾನವಾಗಿದ್ದು, ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದೆ. ಇದರಿಂದ ರಸ್ತೆ ಫುಲ್ ಬ್ಲಾಕ್ ಆಗಿದ್ದು, ರಸ್ತೆಯ ಮಧ್ಯದಷ್ಟು ಮಳೆ ನೀರು ನಿಂತಿದೆ.

 

 

WhatsApp Group Join Now
Telegram Group Join Now
Share This Article