ಬೆಳಗಾವಿ. ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ಗೋಕಾಕ್ ಮತಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿ ಅವರ ಪುತ್ರರಾದ ಯುವ ಮುಖಂಡ ಅಮರನಾಥ ಜಾರಕಿಹೊಳಿ ಅವರನ್ನು ಮತ್ತು ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಪುತ್ರರಾದ ಹಾಗೂ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ರಾಹುಲ ಜಾರಕಿಹೊಳಿ ಅವರನ್ನು ಘಟಪ್ರಭಾ ಪುರಸಭೆ ವತಿಯಿಂದ ಸತ್ಕರಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಧಿಕಾರಿಯಾದ ಶ್ರೀಮತಿ ಎಂ. ಎಸ್ ಪಾಟೀಲ, ಹಿರಿಯರಾದ ಡಿ .ಎಂ ದಳವಾಯಿ, ಕರವೇ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ, ಶಿವಪುತ್ರ ಕೋಗನೂರ, ಮಲ್ಲಿಕಾರ್ಜುನ ತುಕ್ಕಾನಟ್ಟಿ ,ಪ್ರವೀಣ ಮಟಗಾರ, ಮಲ್ಲು ಕೋಳಿ, ಸುರೇಶ ಪೂಜೇರಿ, ಮಾರುತಿ ಹುಕ್ಕೇರಿ,ಇಮ್ರಾನ ಬಟಕುರ್ಕಿ, ಲಕ್ಷ್ಮಣ ಮೇತ್ರಿ ,ಲಗಮಣ್ಣ ನಾಗಣ್ಣವರ, ರಾಜಶೇಖರ ರಜಪೂತ ,ರೆಹಮಾನ ಮುಕಾಶಿ, ರವಿ ನಾವಿ, ಶೇಟ್ಯಪ್ಪ ಗಾಡಿವಡ್ಡರ, ಸಿದ್ದಪ್ಪ ತಳಗೇರಿ, ಎಂ ಐ ಕೋತ್ವಾಲ, ಸುನಿಲ ಕೋಟವಾಗಿ, ಆನಂದ ಗಾಡಿ ವಡ್ಡರ ,ಹಾಗೂ ಪುರಸಭೆ ಸಿಬ್ಬಂದಿ ವರ್ಗದವರು ಮತ್ತು ಘಟಪ್ರಭಾ ನಗರದ ಹಿರಿಯರು ಉಪಸ್ಥಿತರಿದ್ದರು.