ಉತ್ತಮ ಫಲಿತಾಂಶದೊಂದಿಗೆ ತೆರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಂದ ಸನ್ಮಾನ

Ravi Talawar
ಉತ್ತಮ ಫಲಿತಾಂಶದೊಂದಿಗೆ ತೆರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಂದ  ಸನ್ಮಾನ
WhatsApp Group Join Now
Telegram Group Join Now
ರಾಯಬಾಗ ;ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ತೆರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಂದ ಸತ್ಕರಿಸಿ ಸನ್ಮಾನಿಸಲಾಯಿತು.
 ನಂತರ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾ ಜಗದಾಳೆ, ವಿದ್ಯಾರ್ಥಿಗಳು ಎಸ್‌ಎಸ್ ಎಲ್ ಸಿ ಹಾಗೂ ಪಿಯುಸಿ ಪ್ರಮುಖ ಘಟ್ಟವಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಪಾಸಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.   ಮುಂದಿನ ಶಿಕ್ಷಣದ ಭವಿಷ್ಯ ಉತ್ತಮವಾಗಿರಲೆಂದು ಶುಭ ಹಾರೈಸಿದರ ಜೊತೆಗೆ ಗ್ರಾಮಕ್ಕೆ‌ ಕೀರ್ತಿ ತಂದಿರುವುದು ಗ್ರಾಮಸ್ಥರ ಪರವಾಗಿ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ  ಉಪಾಧ್ಯಕ್ಷರಾದ ಮೌಲಾ ನದಾಫ್, ಸದಸ್ಯರಾದ ಸಂಜು ಜಾಧವ, ನಾಮದೇವ ಕಾಂಬಳೆ, ಪಾಂಡುರಂಗ ಹವಾಲ್ದಾರ, ವಿನಾಯಕ ಪವಾರ, ಗ್ರಾಮದ ಹಿರಿಯ ಮುಖಂಡರಾದ ಸದಾಶಿವ ಜಗದಾಳೆ, ರಾಜು ಮುರಚಿಟ್ಟೆ, ರಾಜು ಜಾಧವ, ಸಂತೋಷ ಹವಾಲ್ದಾರ, ಬಸವರಾಜ ಅವನ್ನವರ, ಶೇಷಪ್ಪ ದಾಸರ, ಮಲ್ಲು ಜಗದಾಳೆ, ನಾರಾಯಣ ಮಾನೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article