ಬಳ್ಳಾರಿ,ನ.18: ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದ ಕರ್ನಾಟಕ ಗ್ರಾಮೀಣ ಶಾಖೆಯಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಎಐಕೆಕೆಎಂಎಸ್ ರೈತ ಸಂಘಟನೆಯಿAದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಲಾಯಿತು.ಈ ಸಂದರ್ಭದಲ್ಲಿ ಹೋರಾಟಕ್ಕೆ ಬೆಂಬಲಿಸಿದ್ದ ಎಸ್ಯುಸಿಐ(ಸಿ) ಪಕ್ಷದ ಗ್ರಾಮೀಣ ಸ್ಥಳೀಯ ಸಮಿತಿ ಕಾರ್ಯದರ್ಶಿಗಳಾದ ಎ.ದೇವದಾಸ್ ಮಾತನಾಡುತ್ತಾ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಂಸ್ಥೆಯು ಉತ್ತಮವಾದ ಸೇವೆಯನ್ನು ನೀಡುತ್ತಿತ್ತು, ಇತ್ತೀಚೆಗೆ ಶ್ರೀಧರಗಡ್ಡೆ ಗ್ರಾಮದಲ್ಲಿರುವ ಶಾಖೆಯು ತಮ್ಮ ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ಇಲ್ಲಿನ ಗ್ರಾಹಕರು ಕನಿಷ್ಠ ಸೇವೆ ಪಡೆಯಲೂ ಸಹ ಹರಸಾಹಸ ಪಡುತ್ತಿದ್ದಾರೆ. ಇಲ್ಲಿ ವಯೋ ವೃದ್ಧರು ತಮ್ಮ ನಿವೃತ್ತಿ ವೇತನ ಪಡೆಯಲು ಮುಂದಾದಲ್ಲಿ ಅದನ್ನು ತಾವು ತೆಗೆದುಕೊಂಡ ಇತರೆ ಸಾಲಗಳಿಗೆ ಜಮಾ ಮಾಡಿಕೊಳ್ಳುತ್ತೇವೆ ಎಂಬುದು ಅವರಿಗೆ ಆಘಾತ ನೀಡುತ್ತಿದೆ, ಅನಕ್ಷರಸ್ಥ ಗ್ರಾಹಕರು ತಮ್ಮ ಹಣವನ್ನು ಪಡೆಯಲು ಮತ್ತೊಬ್ಬರನ್ನು ಸಾಕ್ಷಿಯಾಗಿ ಕರೆತರಬೇಕು ಎಂಬುದು, ಆಭರಣಗಳ ಅಡವಿಟ್ಟು ತೆಗೆದುಕೊಂಡ ಸಾಲಕ್ಕೆ, ಬೆಳೆ ಸಾಲಕ್ಕೂ ಜೋಡಣೆ ಮಾಡುತ್ತಿರುವುದು, ಖಾತೆ ಪುಸ್ತಕದಲ್ಲಿ ಅವರ ವ್ಯವಹಾರದ ಮಾಹಿತಿಯನ್ನು ವರ್ಷಗಳು ಕಳೆದರೂ ಸಹ ಮುದ್ರಿಸದಿರುವುದು ಮತ್ತು ಯಾವುದೇ ತರಹದ ಗ್ರಾಹಕರು ತಮ್ಮ ಹಣವನ್ನು ತೆಗೆದುಕೊಳ್ಳಲು ಬ್ಯಾಂಕ್ ಮಿತ್ರ ಎಂಬುವವರ ಸಹಿ ಅಗತ್ಯವಾಗಿ ತೆಗೆದುಕೊಳ್ಳಬೇಕು ಎಂಬುದು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಇಲ್ಲಿನ ಗ್ರಾಹಕರು ತತ್ತರಿಸಿ ಹೋಗಿದ್ದಾರೆ, ಈ ಎಲ್ಲಾ ಸಮಸ್ಯೆಗಳು ಅವರು ತಮ್ಮ ಬ್ಯಾಂಕ್ ಮೇಲೆ ಇರುವ ನಂಬಿಕೆಯೇ ಕಳೆದುಹೋಗುವಂತೆ ಮಾಡಲು ಎಲ್ಲಾ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತಿವೆ. ಹಾಗಾಗಿ ಬ್ಯಾಂಕ್ ಹೀಗಾಗಲೇ ಹಿಂದೆ ಇದ್ದಂತ ನಂಬಿಕೆ ಮತ್ತು ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದ್ದುದ್ದನ್ನು ಹಾಗೆಯೇ ಮುಂದುವರೆಸಲು ಈ ಮೇಲೆ ವಿವರಿಸಿದ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ ಉತ್ತಮ ಸೇವೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯರಾದ ಈ.ಹನುಮಂತಪ್ಪ ಮತನಾಡುದರು. ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾ ಅಧ್ಯಕ್ಷರು ಗೋವಿಂದ್, ರೈತರಾದ ಆಶಾ ಬೇಗಂ, ನಿಜಾಮ್, ವಿರೇಶಪ್ಪ, ಹನುಮಂತಪ್ಪ, ಮುಕ್ಕಣ್ಣ, ಸೇರಿದಂತೆ ರೈತರು ಉಪಸ್ಥಿತರಿದ್ದರು.


