ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಿ : ಪ್ರೊ.ಎ.ಬಿ ರಾಮಚಂದ್ರಪ್ಪ

Ravi Talawar
ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಿ : ಪ್ರೊ.ಎ.ಬಿ ರಾಮಚಂದ್ರಪ್ಪ
WhatsApp Group Join Now
Telegram Group Join Now
ರಾಯಬಾಗ29: ಸಂವಿಧಾನ  ಮತ್ತು ಮೀಸಲಾತಿ ವಿರೋಧಿಯಾದ ಬಿಜೆಪಿ ದೇಶವನ್ನು ಮನುವಾದದೆಡೆಗೆ ಕೊಂಡೊಯ್ಯುತ್ತಿದೆ. ದೇಶದ ಸಂಪತ್ತನ್ನು ಐಟಿ ಇಡಿ ಮೂಲಕ ಕೊಳ್ಳೆ ಹೊಡೆಯುತ್ತಿದೆ. ಆದುದರಿಂದ ಜನವಿರೋಧಿ ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಬೇಕಾಗಿದೆ ಎಂದು  ಮಾನವ ಬಂಧುತ್ವ ವೇದಿಕೆ’ಯ ರಾಜ್ಯ ಸಂಚಾಲಕರಾದ ಪ್ರೊ. ಎ ಬಿ ರಾಮಚಂದ್ರಪ್ಪ ಹೇಳಿದರು.
ಅವರಿಂದು  ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಚೆನ್ನದಾಸರ ವಾಡೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಸಂವಿಧಾನ ರಕ್ಷಿಸಿ, ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ಕೊಟ್ಟಿದೆ, ಸಿದ್ದರಾಮಯ್ಯ ಸರ್ಕಾರ ಬಡವರಿಗೆ ಉಚಿತ ಅಕ್ಕಿ ಕೊಟ್ಟರೆ, ಬಿಜೆಪಿ ಅದೇ ಅಕ್ಕಿಯನ್ನು ಕಸಿದು ಅಕ್ಷತೆ ಕಾಳು ಮಾಡಿ ನಮ್ಮ ಯುವಕರ ಕೈಗೆ ಕೊಟ್ಟು ಭಾವನಾತ್ಮಕ ಕೋಮುವಾದ ಬಿತ್ತುತ್ತಿದೆ. ನಮಗೆ ಅನ್ನ, ಶಿಕ್ಷಣ, ಸಾಮಾಜಿಕ ನ್ಯಾಯ ಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಅವರು ಮಾತನಾಡಿ, ಸಂವಿಧಾನ ಬದಲಿಸುವ ಹುನ್ನಾರದಲ್ಲಿರುವ ಬಿಜೆಪಿಯನ್ನು ಸೋಲಿಸಿ, ಸಂವಿಧಾನ ರಕ್ಷಿಸಿ ಗ್ಯಾರಂಟಿಗಳ ಮೂಲಕ ಬಹುಜನರ ಬದುಕಿಗೆ ಆಸರೆಯಾಗಿರುವ ಕಾಂಗ್ರೆಸ್ ನ್ನು ಗೆಲ್ಲಿಸಲೇಬೇಕಾಗಿದೆ. ಮುಂಬರುವ ತಾಲುಕಾ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಕೇಳುವ ಮತ್ತು ಕೆಲವು ಬೇಡಿಕೆಗಳನ್ನು ಪೂರೈಸುವ ಸಲುವಾಗಿ ನಮ್ಮ ಸಮುದಾಯ ಬಹಿರಂಗವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ತೀರ್ಮಾನಿಸಿದೆ. ಅದಕ್ಕಾಗಿ ನಾವೆಲ್ಲ ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮತ ನೀಡಿ ಬೆಂಬಲಿಸಬೇಕಿದೆ ಎಂದರು.
ಸ್ಥಳೀಯ ಸಮುದಾಯದ ಮುಖಂಡರು ಒಕ್ಕೊರಲಿನಿಂದ  ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಒಂದಾಗಿ ಮತ ನೀಡಿ ಗೆಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಉದಯ ಗಾಣಿಗೇರ, ಮಹೇಂದ್ರ ಗಾಣಿಗೇರ, ಸತ್ಯಪ್ಪ ಗೊಳಸಂಗಿ, ಶ್ರೀಮಂತ ಮಾಳಗೆನ್ನವರ, ಹನಮಂತ ತಾಯಪ್ಪ ಸಣ್ಣಕ್ಕಿನವರ, ಪ್ರೋ ಸದಾಶಿವ ಗಾಣಿಗೇರ, ಸ್ಥಳೀಯ ಮುಖಂಡರಾದ  ಪರಸಪ್ಪ ಭೀಮಪ್ಪ ಸಣ್ಣಕ್ಕಿನವರ, ಪರಸಪ್ಪ ಸತ್ಯಪ್ಪ ಪೂಜಾರಿ, ವಸಂತು ದುರ್ಗಪ್ಪ ಅಕ್ಕೆನ್ನವರ, ಶೆಟ್ಟೆಪ್ಪ ದುರ್ಗಪ್ಪ ದಳವಾಯಿ, ಹನುಮಂತ ಈಶ್ವರ್ ಅಕ್ಕೆನ್ನವರ, ಪ್ರಭಾಕರ ತಾಯಪ್ಪ ಗಾಣಿಗೇರ , ಭೀಮಪ್ಪ ಲಕ್ಷ್ಮಣ ಅಕ್ಕೆನ್ನವರ , ಪರಸಪ್ಪ ಶಂಕರ್ ಅಕ್ಕೆನ್ನವರಅನೇಕ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article