ಬಳ್ಳಾರಿ ಜೂ 10. ನಗರದ ಕೋಟೆ ಪ್ರದೇಶದಲ್ಲಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ದಲಿತ ಚಳುವಳಿಯ ಪಿತಾಮಹಾ ಪ್ರೊ ಬಿ ಕೃಷ್ಣಪ್ಪರವರ 87 ನೇ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಕದಸಂಸ ರಾಜ್ಯ ಸಮಿತಿ ಸದಸ್ಯರಾದ ಪಿ ಜಗದೀಶ್ವರರೆಡ್ಡಿ ಮಾತನಾಡಿ ಪ್ರೊ ಬಿ ಕೃಷ್ಣಪ್ಪರವರಿಂದ ದಲಿತ ಸಂಘರ್ಷ ಸಮಿತಿಯು ಸ್ಥಾಪನೆಗೊಂಡ ಅಂದಿನಿಂದ ಇಂದಿನವರೆಗೂ ಪ್ರೊ.ಬಿ.ಕೃಷ್ಣಪ್ಪನವರ ಚಿಂತನೆ, ಆದರ್ಶ ಮೈಗೂಡಿಸಿಕೊಂಡು ಮುನ್ನಡೆಯುತ್ತಿದೆ. ಹಲವು ವರ್ಷಗಳಿಂದ ದಲಿತರಿಗೆ, ದಮನಿತರಿಗೆ, ಶೋಷಿತರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಬಳ್ಳಾರಿ ನಗರ ಸಂಚಾಲಕ ಹೊನ್ನೇಶ್ ಬಿ ಗೋನಾಳ್, ಪದಾಧಿಕಾರಿಗಳಾದ ಪೆದ್ದಎರಿಸ್ವಾಮಿ, ಸೋಮಪ್ಪ, ಗುರುದೇವ, ಆನಂದ ಗೋನಾಳ್, ಕೊಳಗಲ್ಲು ಎರಿಸ್ವಾಮಿ, ದೇವಿನಗರ ಶೀನ, ಅಲ್ಲಿಪುರ ಸ್ವಾಮಿ, ವೈ ಕಗ್ಗಲ್ಲು ಗ್ರಾಮ ಸಂಚಾಲಕ ಚಂದ್ರಶೇಖರ, ನಾಗರಾಜ ಹೆಗಡೆ, ದಿನೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.