ಮಹಾಲಿಂಗಪುರ : ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲ. ಕ್ರೀಡೆ, ಕರಾಟೆ, ನೃತ್ಯ ಮುಂತಾದ ಚಟುವಟಿಕೆಗಳ ಸಂಗಮ ಆ ನಿಟ್ಟನಲ್ಲಿ ನನ್ನ ತಂದೆಯವರ ಮಾರ್ಗದರ್ಶನದಲ್ಲಿ ಓದಿನಲ್ಲಿ ತರಗತಿಗೆ ಯಾವಾಗಲೂ ಪ್ರಥಮ ಸ್ಥಾನದಲ್ಲಿದ್ದು ಕ್ರೀಡೆ, ಕರಾಟೆ, ನೃತ್ಯಗಳಲ್ಲಿಯೂ ವಿಶೇಷ ಸಾಧನೆ ಮಾಡಿ ರಾಜ್ಯೋತ್ಸವ ಮುಂತಾದ ಪ್ರಶಸ್ತಿ ಪಡೆದು ಈಗ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ಆಯ್ಕೆಯಾಗಿದ್ದೇನೆ, ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದ ತರಬೇತಿಗೆ ಆಯ್ಕೆಯಾದ ಪೃಥ್ವಿ ಧರೆಪ್ಪ ಬ್ಯಾಕೋಡ ಹೇಳಿದರು.
ಸಮೀಪದ ಕೆಸರಗೊಪ್ಪ ಗ್ರಾಮದ ೯ನೇ ತರಗತಿ ವಿದ್ಯಾರ್ಥಿನಿ ಪೃಥ್ವಿ ಲಕ್ನೋದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ೮ ಮಹಿಳಾ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ಕರ್ನಾಟಕದಿಂದ ಏಕೈಕ ಬಾಲಕಿಯಾಗಿ ಆಯ್ಕೆಯಾಗಿ ಸಾಧನೆ ಮಾಡಿರುವ ಪ್ರಯುಕ್ತ ಸ್ಥಳೀಯ ಜೇಸಿ ಆಂಗ್ಲ ಮಾಧ್ಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ, ಸಾಧಕಿಯ ತಂದೆ ಧರೆಪ್ಪ ಬ್ಯಾಕೋಡ, ಯೋಗ ಶಿಕ್ಷಕ ರಾಘವೇಂದ್ರ ನೀಲನ್ನವರ, ಶಿಕ್ಷಕರಾದ ಎಸ್,ಬಿ. ಮಟಗಾರ, ಶಾರದಾ ಮನ್ನಯ್ಯನವರಮಠ, ಸುಜಾತಾ ಹೊಸಕೇರಿ, ಸೌರಭ ಮಹಾಜನ ಇತರರಿದ್ದರು.