ಮಾದಿಗ ಸಮಾಜದ ಬೆಂಬಲ ಸವದಿ ಬೆಂಬಲಿತ ಪ್ಯಾನಲ್‌ಗೆ: ಅಧ್ಯಕ್ಷ ಮಂಜೂ ಹೋಳಿಕಟ್ಟಿ

Pratibha Boi
ಮಾದಿಗ ಸಮಾಜದ ಬೆಂಬಲ ಸವದಿ ಬೆಂಬಲಿತ ಪ್ಯಾನಲ್‌ಗೆ: ಅಧ್ಯಕ್ಷ ಮಂಜೂ ಹೋಳಿಕಟ್ಟಿ
WhatsApp Group Join Now
Telegram Group Join Now
ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಚುನಾವಣೆಯಲ್ಲಿ ಮಾದಿಗ ಸಮಾಜದ ಸರ್ವಾನುಮತದ ನಿರ್ಣಯದೊಂದಿಗೆ ಯಾರನ್ನು ಚುನಾಚಣೆಗೆ ನಾಮಪತ್ರ ಸಲ್ಲಿಸಿಲ್ಲ, ಆದರೆ ಯಾರೋ ನಾಲ್ಕು ಜನ ಸೇರಿ ಒಬ್ಬರನ್ನು ನೇಮಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ, ಆದರೆ ನಮ್ಮ ಸಮಾಜದ ಬೆಂಬಲ ಅವರಿಗೆ ಇಲ್ಲಾ, ಮಾದಿಗ ಸಮಾಜ ಸವದಿ ಬೆಂಬಲಿತ ಪ್ಯಾನೆಲ್‌ಗೆ ಬೆಂಬಲ ವನ್ನು ವ್ಯಕ್ತಿಸುವದಾಗಿ ಮಾದಿಗ ಸಮಾಜದ ಅದ್ಯಕ್ಷ ಮಂಜೂ ಹೋಳಿಕಟ್ಟಿ ಹೇಳಿದರು
ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಮಾದಿಗ ಸಮಾಜದ ಅಥಣಿ ತಾಲೂಕು ಅಧ್ಯಕ್ಷ ಮಂಜೂ ಹೋಳಿಕಟ್ಟಿ ಮಾತನಾಡಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ ನಮ್ಮ ಸಮಾಜದ ಒಪ್ಪಿಗೆ ಪಡೆದು ಯಾರು ಸಹ ನಾಮಪತ್ರ ಸಲ್ಲಿಸಿಲ್ಲ, ಆದರೆ ಕಲವು ಜನರ ಗುಂಪಿನಿAದ ಮಾದಿಗ ಜನಾಂಗದ ವ್ಯಕ್ತಿಯನ್ನು ಚುನಾವಣೆಗೆ ನಾಮಪತ್ರ ಸಲ್ಲಿಸಿ, ಸಮಾಜ ಬಾಂಧವರಲ್ಲಿ ತಪ್ಪು ಮಾಹಿತಿ ನೀಡಿ ಸಮಾಜದ ಬೆಂಬಲ ನಮಗೆ ಇದೆ ಎಂದು ಹೇಳುತ್ತಿದ್ದು ಅದಕ್ಕೆ ಯಾರು ಸಹ ಕೀವಿಗೊಡಬಾರದು, ಅಲ್ಲದೆ ಸವದಿ ಅವರ ಬೆಂಬಲಿತ ಪ್ಯಾನಲ್‌ನೊಂದಿಗೆ ಮಾದಿಗ ಸಮಾಜ ಇದೆ ಎಂದು ಹೇಳಿದರು
ಈ ವೇಳೆ ಸಮಾಜ ಮುಖಂಡರಾದ ಸದಾಶಿವ ಮಾಂಗ, ಪ್ರಕಾಶ ಹೆಗ್ಗಣ್ಣವರ, ಪರಶು ಮುರಗುಂಡಿ, ಪ್ರಮೋದ ಹಿರೇಮನಿ, ಮಹಾದೇವಿ ಹೋಳಿಕಟ್ಟಿ, ಮಹಾವೀರ ಆಚಾರಟ್ಟಿ, ಆನಂದ ಹೋಳಿಕಟ್ಟಿ, ಶಂಕರ ಹಿರೇಮನಿ, ಉದಯ ಅವಳೆ, ಪರಶು ಹೆಗ್ಗಣ್ಣವರ, ಬಾಬುರಾವ ಜೆಂಡೆ, ಹನಮಂತ ಮಾದರ, ಆದರ್ಶ ಗಸ್ತಿ, ಮಹಾಂತೇಶ ಮಾದರ, ಸಂಜೂ ಮಾದರ ಸಂಜೂ ಪಾರ್ಥನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article