ಬೈಲಹೊಂಗಲ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬೈಲಹೊಂಗಲ ಯೋಜne ಮುಖಾಂತರ ಬಾಲ್ಯ ವಿವಾಹ ತಡೆ, ಶಿಕ್ಷಣದ ಮಹತ್ವ, ಭಾರತೀಯ ಸಂಸ್ಕೃತಿ, ಅವಿಭಕ್ತ ಕುಟುಂಬ, ಸ್ವಚ್ಛತೆ ಮಹತ್ವ ಕುರುತು ಮಕ್ಕಳಿಗೆ ಮತ್ತು ಹಿರಿಯರಿಗೆ ತಿಳುವಳಿಕೆ ನೀಡಲಾಗುತ್ತೆ ಎಂದು ಬೈಲಹೊಂಗಲ ತಾಲೂಕ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಸಂಘದ ಯೋಜನಾಧಿಕಾರಿ ವಿಜಯಕುಮಾರ ಹೇಳಿದರು.
ಅವರು ತಾಲೂಕಿನ ಕೆಂಗಾನೂರು ವಲಯ ಅಮಟೂರು ಕಾರ್ಯಕ್ಷೇತ್ರದಲ್ಲಿ ಭಾರತಾಂಬೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.. ಈ ಕಾರ್ಯಕ್ರವನ್ನು ಅಧ್ಯಕ್ಷತೆಯನ್ನು ಪ್ರೌಢಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ದುಂಡಪ್ಪ ಕಾಲಗೇರಿ,ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೌಢಶಾಲೆ ಮುಖ್ಯೋಪಾಧ್ಯಯರಾದ ಪಿ ಎಸ್ ಚವಾಹಾನ್ ಹಾಗೂ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಯರಾದ ಎಸ್ ಎಫ್ ಹುಬ್ಬಳ್ಳಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸಂಗೀತಾ ಸೋಗಿನಮನಿ, ಬೀದಿ ನಾಟಕ ಕಲಾ ತಂಡದ ಮುಖ್ಯಸ್ಥರಾದ ಎಸ್ ಎಸ್ ಹಿರೇಮಠ ವಲಯದ ಮೇಲ್ವಿಚಾರಕರು ಮಾಂತೇಶ್ ಸರ್,ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶೈಲಾ ಕಾರ್ಯಕ್ರಮ ನಿರೂಪಣೆ ಮಾಡಿದರು ಸೇವಪ್ರತಿನಿಧಿ ಐಶ್ವರ್ಯ ಕಾರ್ಯಕ್ರಮಕೆ ಸ್ವಾಗತ ಮಾಡಿದರು ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು,ಮಕ್ಕಳು, ಉಪಸ್ಥಿತರಿದ್ದರು .