ಬಳ್ಳಾರಿ. ಆ. 11: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಸುರೇಶ್ ನಾಯ್ಕ್ ಆರ್. ಇವರಿಗೆ ಸಮಾಜ ಕಾರ್ಯದಲ್ಲಿ ಪಿ ಎಚ್ಡಿ ಪದವಿಯನ್ನು ಪ್ರಕಟಿಸಿದೆಬಳ್ಳಾರಿ ಜಿಲ್ಲೆ, ಬಳ್ಳಾರಿ ನಗರದ ಗುಗ್ಗರಹಟ್ಟಿಯ ವೆಂಕಟೇಶ್ ನಾಯ್ ಆರ್ ಮತ್ತು ಪದ್ಮ ಬಾಯಿ ಆರ್ ಇವರ ಮಗನಾದ ಸುರೇಶ್ ನಾಯ್ಕ್. ಆರ್ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಪ್ರೊ. ಗೌರಿ ಮಾಣಿಕ ಮಾನಸ್ ಮಾರ್ಗದರ್ಶನದಲ್ಲಿ ಮಂಡಿಸಿದ “ಎ ಸ್ಟಡಿ ಆನ್ ಸೋಶಿಯಲ್ ವರ್ಕ್ ಎಜುಕೇಷನ್ ಇನ್ ಕಲ್ಯಾಣ ಕರ್ನಾಟಕ: ಇಶುಸ್ಟ್ ಅಂಡ್ ಚಾಲೇಂಜ್” (“A Study on Social Work Education in Kalyana Karnataka: Issues and Challenges “) 2 ಮಂಡಿಸಿರುತ್ತರೆ. ಇವರು ಮಂಡಿಸಿದ ಈ ಮಹಾಪ್ರಬಂದಕ್ಕೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು “ಡಾಕ್ಟರ್ ಆಫ್ ಫಿಲಾಸಫಿ” ಪದವಿಯನ್ನು ಪ್ರಕಟಿಸಿದೆ. ಪ್ರಸ್ತುತ ಶ್ರೀ ಸುರೇಶ್ ನಾಯ್ಡ್ ಆರ್. ಇವರು ಸಮಾಜ ಕಾರ್ಯ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಿಎಚ್.ಡಿ ಮಾಡುವ ಮುಂಚೆ 10 ವರ್ಷಗಳ ಕಾಲ ವಿ.ವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಸಹ ಸೇವೆ ಸಲ್ಲಿಸಿ ನೂರಾರು ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೋತ್ಸಾಹ ನೀಡಿದ್ದಾರೆ. ಪಿಎಚ್ಡಿ ಲಭಿಸಿದ್ದಕ್ಕಾಗಿ ವಿಭಾಗದ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಕುಟುಂಬದವರು ಶುಭ ಕೋರಿದರು.