ಗದಗ, 25 : ದಾಸ ಸಾಹಿತ್ಯದಲ್ಲಿ ಗಣಿತ ಹಾಗೂ ತಂತ್ರಜ್ಞಾನ ವಿಷಯದ ಕುರಿತಾದ ಸಂಶೋಧನೆಯ ಮಾಡಿ ಸೌರಭ ದಾಸ ಸಾಹಿತ್ಯ ವಿಶ್ವವಿದ್ಯಾಲಯದಿಂದ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ‘ದಾಸ ಚಿಂತನಮಣಿ’ ಪ್ರಶಸ್ತಿಗೆ ಭಾಜನರಾದ ಕರಿಯಮ್ಮ ಕಲ್ಲು ಬಡಾವಣೆಯ ಶ್ರೀ ರಾಘವೇಂದ್ರ ಮಹಾಸ್ವಾಮಿಗಳವರ ಮಠದ ಅರ್ಚಕರು ಹಾಗೂ ರಂಗ ಕರ್ಮಕರ್ಮಿಗಳಾದ ಫಣೀಂದ್ರಚಾರ್ಯ ದ್ಯಾಮೇನಹಳ್ಳಿ ಅವರಿಗೆ ಶ್ರೀ ಗುರು ರಾಯರ ಸದ್ಭಕ್ತರಾದ ಶ್ರೀನಿವಾಸ ಹುಬ್ಬಳ್ಳಿಯವರು, ಕಿರಟಗೇರಿಯ ಕಲ್ಮೇಶ್ವರಯ್ಯ
ಹಿರೇಮಠ ಅವರು, ಎಸ್. ಟಿ. ವನ್ನಾಲ ಮತ್ತು ರಂಗಕರ್ಮಿ ಮೌನೇಶ ಚಿ. ಬಡಿಗೇರ(ನರೇಗಲ್ಲ) ಸನ್ಮಾನಿಸಿ ಗೌರವಿಸಿದರು.