ಮಹಾದಾಯಿಗಾಗಿ ಮತ್ತೇ ಹೋರಾಟಕ್ಕೆ ಇಳಿದ ರೈತರು

Ravi Talawar
ಮಹಾದಾಯಿಗಾಗಿ ಮತ್ತೇ ಹೋರಾಟಕ್ಕೆ ಇಳಿದ ರೈತರು
WhatsApp Group Join Now
Telegram Group Join Now
ಧಾರವಾಡ: ಮಹಾದಾಯಿ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಪರಿಸರವಾದಿಗಳ ವಿರುದ್ಧ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮಹಾದಾಯಿಗಾಗಿ ಮಹಾ ವೇದಿಕೆ ಸದಸ್ಯರು, ವಿವಿಧ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ವಿಳಂಬ ಮಾಡುತ್ತಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರೊಂದಿಗೆ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ರಾಜಕೀಯ ಪ್ರೇರಿತರಾದ ಡೋಂಗಿ ಪರಿಸರವಾದಿಗಳು ಮಹಾದಾಯಿ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಧಾರವಾಡದ ಕಲಾ ಭವನದಲ್ಲಿ ಸೇರಿ ಅಲ್ಲಿಂದ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು ಇನ್ನು ನಕಲಿ ಪರಿಸರವಾದಿಗಳ ವಿರುದ್ದ ತನಿಖೆ ಆಗಬೇಕು ಅಂಥವರು ಮೇಲೆ ಕ್ರಮ ಗೈಗೊಳ್ಳಬೇಕು ಎಂದು ರೈತರು ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದರು
WhatsApp Group Join Now
Telegram Group Join Now
Share This Article