ಮನಸ್ಸಿನ ಶಾಂತಿಯೇ ಮಾನವನಿಗೆ ದಿವ್ಯ ಔಷಧ..ಪ್ರಭು ಮಹಾರಾಜ

MK HasiruKranti
ಮನಸ್ಸಿನ ಶಾಂತಿಯೇ ಮಾನವನಿಗೆ ದಿವ್ಯ ಔಷಧ..ಪ್ರಭು ಮಹಾರಾಜ
Exif_JPEG_420
WhatsApp Group Join Now
Telegram Group Join Now
ಮುಗಳಖೋಡ (2) ಇಂಚಗೇರಿ ಸಂಪ್ರದಾಯ ಮನುಷ್ಯನನ್ನು ಪಾರಮಾರ್ಥದಿಂದ ದೇವನಾಗಲು ಸಾಧ್ಯ ಎಂದು ತೋರಿಸಿದೆ, ಸದ್ಗುರು ಕೊಟ್ಟ ನಾಮದಲ್ಲಿ ಶಾಂತಿ ಇದೆ ಮನಶಾಂತಿಯೇ ಮಾನವನಿಗೆ ದಿವ್ಯ ಔಷಧಿ  ಎಂದು ಇಂಚಗೇರಿ ಸಂಪ್ರದಾಯದ ಹಿಪ್ಪರಗಿ ಮಠದ ಪ್ರಭು ಬೆನ್ನಾಳೆ ಮಹಾರಾಜು ಹೇಳಿದರು.

ಅವರು ಗುರುವಾರ 2 ರಂದು ಸಂಪ್ರದಾಯ ಸದ್ಬಕ್ತ ಮಲ್ಲಪ್ಪ ಜಂಬಗಿ ಯವರ 38 ನೇ ಸಪ್ತಾಹದ ದಿವ್ಯ ಸಾನಿಧ್ಯವಹಿಸಿ    ಗುರು ಕೊಟ್ಟ ನಾಮದಿಂದ ಕಾಯಕದಲ್ಲಿಯೇ ಜ್ಞಾನಶಕ್ತನಾಗಿ ಸಂಸಾರಿಕ ಜೀವನ  ಸಾಗಿಸುತ್ತಾ ಸುಲಭವಾಗಿ  ಬವಸಾಗರ ದಾಟಿಸುವ ಮಾರ್ಗ ತೋರಿಸಿದ ಸಾಂಪ್ರದಾಯದ ಗುರುಗಳು ಸದಾ ಕಾಲ ಪೂಜಿಪರು,  ಗುರುಸ್ಮರಣೆ, ಜ್ಞಾನದ ದಾರಿಯಲ್ಲಿ ಸಾಗಿ  ಈ ಪುಣ್ಯರ  ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವು  ಪಾವನಾತಿಥರು ಎಂದು ಆರ್ಶೀವಚನ ನೀಡಿದರು .
ಅರವಿಂದ್ ವಕೀಲರು , ಗಿರಮಲ್ಲ ತೆಗೂರವರು ಸಾಂಪ್ರದಾಯದ ತತ್ವ ಸಿದ್ದಾಂತದ ಬಗ್ಗೆ  ಪ್ರವಚನ ನೀಡಿದರು. ಸಂಗಪ್ಪ ಜಂಬಗಿ,ಸಿದ್ದಪ್ಪ ಜತ್ತಿ,ಮಹಾದೇವ ಕುಲಕರ್ಣಿ,ಶಿವಾಜ್ಜ ಜಂಬಗಿ,ಗಿರಿಗೌಡ ಪಾಟೀಲ,ವಿನೋಬಾ  ಜಂಬಗಿ, ಯಲ್ಲಾಲಿಂಗ ಮುಧೋಳ,ದಿಲಾವರ ಎಲಿಗಾರ,ಶಿವಸಂಗಯ್ಯ ಹಿರೇಮಠ,ಹಾಗೂ ಸಾಂಪ್ರದಾಯದ ಸದ್ಬಕ್ತರು ಇದ್ದರು.
WhatsApp Group Join Now
Telegram Group Join Now
Share This Article