ಅಥಣಿ: ಪೊಲೀಸ್ ಠಾಣೆ ವತಿಯಿಂದ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಅವರ ಅಧ್ಯಕ್ಷತೆಯಲ್ಲಿ ಪೊಲೀಸ್ ಸಮುದಾಯ ಭವನದಲ್ಲಿ ಮೊಹರಂ ಪ್ರಯುಕ್ತ ಶಾಂತಿ ಪಾಲನಾ ಸಭೆ ಜರುಗಿತು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಮೊಹರಂ ಹಬ್ಬವು 10 ದಿನಗಳ ವರೆಗೆ ನಡೆಯುತ್ತಿದ್ದು. ಇದರ ಮದ್ಯ ಪ್ರಚೋದನಕಾರಿ ಪೋಸ್ಟಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡದಂತೆ ನೋಡಿಕೊಳ್ಳಿ. ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟಗಳನ್ನ ಹರಿಬಿಟ್ಟು ಸಮಾಜದ ಸ್ವಾಸ್ತ್ಯ ಕೆಡಿಸುವ ಪ್ರಯತ್ನ ಮಾಡುತ್ತಾರೆ ಇಂತಹ ಸಮಾಜ ಘಾತುಕರ ಸಾಮಾಜಿಕ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸಲಾಗುವುದು ಹಾಗೂ ಹಂತವರ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರು ಕೂಡ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ಮೊಹರಂ ಆಚರಣೆ ವೇಳೆ ಜನದಟ್ಟಣೆ ಉಂಟಾಗದಂತೆ ನೋಡಿ ಕೊಳ್ಳಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಮೇಲೆ ಸೂಕ್ತ ನಿಗಾ ವಹಿಸಲಾಗುವುದು ಎಂದರು.
ನಂತರ ಮಾತನಾಡಿದ ಚಿಕ್ಕೋಡಿ ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ಆಶೀಪ್ ತಾಬೋಳಿ ಅಥಣಿ ತಾಲ್ಲೂಕಿನಲ್ಲಿ ಮೊಹರಂ ಹಬ್ಬ ಪ್ರತಿ ವರ್ಷ ಎಲ್ಲ ಸಮುದಾಯದವರು ಒಗ್ಗೂಡಿ ಅತಿ ವಿಜೃಂಬಣೆಯಿಂದ ಆಚರಣೆ ಮಾಡುತ್ತಾ ಬಂದಿದ್ದು ಹಬ್ಬಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಅದಕ್ಕೆ ಮಹಿಳಾ ಪೋಲಿಸ್ ಸಿಬ್ಬಂದಿಯನ್ನು ಹೆಚ್ಚಿನ ಬಂದು ಬಸ್ತ್ ಹಾಕಬೇಕು ಎಂದು ಪೋಲಿಸ್ ಅಧಿಕಾರಿಗಳಿಗೆ ವಿನಂತಿ ಮಾಡುತ್ತವೆ. ಈ ವರ್ಷವೂ ಕೂಡ ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ನೀಡದೆ ಶಾಂತ ರೀತಿಯಲ್ಲಿ ಅಚ್ಚು ಕಟ್ಟಾಗಿ ಹಬ್ಬ ಆಚರಣೆ ಮಾಡುತ್ತೇವೆ ಎಂದರು.
ನಂತರ ದಲಿತ ಮುಖಂಡರಾದ ಶಶಿ ಸಾಳವೆ, ರಾಜೇಂದ್ರ ಐಹೊಳೆ, ಆಶೀಫ ತಾಂಬೊಳಿ, ರಸೂಲಸಾಬ್ ನಂದಾಪ್ಪ, ಹಾಗೂ ಮಂಜು ಹೊಳಿಕಟ್ಟಿ ಮಾತನಾಡಿ ಮೊಹರಂ ಹಬ್ಬ ಶಾಂತ ರೀತಿಯಲ್ಲಿ ಅಚ್ಚು ಕಟ್ಟಾಗಿ ಆಚರಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಸಯ್ಯದ್ ಅಮೀನ ಗದ್ಯಾಳ, ಅಬ್ದುಲ್ ಅಜೀಜ್ ಮುಲ್ಲಾ, ಅಬಿದ ಮಾಸ್ಟರ್, ಬಾಬು ಖೆಮಲಾಪುರ, ಇಮ್ರಾನ್ ಪಟಾಯತ, ನಿಸಾರ ಶೇಖ, ರಸೂಲಸಾಬ್ ನದಾಫ್, ಶಬೀರ ಸಾತಬಚ್ಚೆ, ಮಹಾಂತೇಶ ಬಾಡಗಿ, ವಿನಾಯಕ ದೇಸಾಯಿ, ಶಶಿ ಸಾಳವೇ, ರಾಜೇಂದ್ರ ಐಹೊಳೆ, ಮಂಜು ಹೋಳಿಕಟ್ಟಿ, ಸುಂದರ ಸೌದಾಗರ, ಶಿವಾನಂದ ಸೌದಾಗರ, ಐತೇಶಾಮ ಕಾಜಿ, ಸಾಜಿದ ಮುಲ್ಲಾ, ಅಲ್ಲಾಬಕ್ಷ್ ಚಿಂಚಲಿ, ಸದಾಶಿವ ಮಾಂಗ ಶಂಕರ ಮುರಗುಂಡಿ, ಪರಶುರಾಮ್ ಮುರಗುಂಡಿ, ಮುರುಗೇಶ ಪಟ್ಟಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.