ವರ್ಗಾವಣೆ ದಿನ ಪೋಸ್ಟಿಂಗ್‌ಗೆ ಹಣ ನೀಡಬೇಕಾಗುತ್ತದೆ ಇದು ಕ್ಯಾನ್ಸರ್‌ಗಿಂತ ಕೆಟ್ಟದಾಗಿದೆ: ಭಾಸ್ಕರ್ ರಾವ್

Ravi Talawar
ವರ್ಗಾವಣೆ ದಿನ ಪೋಸ್ಟಿಂಗ್‌ಗೆ ಹಣ ನೀಡಬೇಕಾಗುತ್ತದೆ ಇದು ಕ್ಯಾನ್ಸರ್‌ಗಿಂತ ಕೆಟ್ಟದಾಗಿದೆ:  ಭಾಸ್ಕರ್ ರಾವ್
WhatsApp Group Join Now
Telegram Group Join Now

ಬೆಂಗಳೂರು: ಯಾದಗಿರಿಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ಸಾವು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಪೊಲೀಸ್ ವರ್ಗಾವಣೆಯಲ್ಲಿ ಹಣ ಮತ್ತು ಜಾತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ವೃತ್ತಿಯ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ, ಆದರೆ ಅವರು ಅದೇ ಹುದ್ದೆಯಲ್ಲಿ ಮುಂದುವರಿಯಲು ಹಣಕ್ಕಾಗಿ ಶಾಸಕರು ಮತ್ತು ಆವರ ಪುತ್ರ ಬೇಡಿಕೆಯಿಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಅದಾದ ಒಂದು ದಿನದ ನಂತರ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ 53 ವರ್ಷದ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡರು, ಇದು ಕೆಲಸದ ಸ್ಥಳದಲ್ಲಿನ ಒತ್ತಡದ ಕಾರಣ ಎಂದು ಶಂಕಿಸಲಾಗಿದೆ.

ಎರಡು ಘಟನೆಗಳು ಎರಡು ಪ್ರಮುಖ ವಿಷಯಗಳ ಬಗ್ಗೆ ಸುಳಿವು ನೀಡಿವೆ. ಪೊಲೀಸ್ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಮತ್ತು ರಾಜಕೀಯ ಹಸ್ತಕ್ಷೇಪವನ್ನು ರದ್ದುಗೊಳಿಸುವ ಏಕೈಕ ಉದ್ದೇಶದಿಂದ ಸ್ಥಾಪಿಸಲಾದ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ (ಪಿಇಬಿ) ಅಸ್ತಿತ್ವದಲ್ಲಿದ್ದರೂ ಪೊಲೀಸ್ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ವರ್ಗಾವಣೆಗಾಗಿ ಹಣ ನೀಡುವುದು ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ರಾಜಕಾರಣಿಗಳು ಕೈ ಹಾಕುತ್ತಾರೆ, ಅದಕ್ಕಿಂತ ಹೆಚ್ಚಾಗಿ ಪೊಲೀಸ್ ಇಲಾಖೆಯಲ್ಲಿಯೇ ವರ್ಗಾವಣೆ ಹಸ್ತಕ್ಷೇಪ ಹೆಚ್ಚು ಮಾಡಲಾಗುತ್ತದೆ ಎಂಬುದು ಬಹಿರಂಗ ರಹಸ್ಯ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹಣ ಅಥವಾ ಜಾತಿಯ ಆಧಾರದ ಮೇಲೆ ಎಂದಿಗೂ ವರ್ಗಾವಣೆಯಾಗುವುದಿಲ್ಲ ಎಂದು ಹೇಳಿದರೆ, ವರ್ಗಾವಣೆ ದಿನ ಪೋಸ್ಟಿಂಗ್‌ಗೆ ಹಣ ನೀಡಬೇಕಾಗುತ್ತದೆ ಇದು ಕ್ಯಾನ್ಸರ್‌ಗಿಂತ ಕೆಟ್ಟದಾಗಿದೆ ಎಂದು ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳುತ್ತಾರೆ.

WhatsApp Group Join Now
Telegram Group Join Now
Share This Article