ರಾಯಬಾಗ: ಚಿತ್ರಕಲೆಯು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಕಲೆ ಹೊರತರುತ್ತದೆ ಎಂದು ಮಾಜಿ ಸಂಸದ ಅಮರಸಿಂಹ ಪಾಟೀಲ ಹೇಳಿದರು.
ಪಟ್ಟಣದ ಶಿಕ್ಷಣ ಪ್ರಸಾರಕ ಮಂಡಳದ ವಿವೇಕಾನಂದ ಕಲಾ ಮಂದಿರ ಕಾಲೇಜನಲ್ಲಿ ಆಯೋಜಿಸಿದ್ದ ಭಿತ್ತಿ ಚಿತ್ರ ಕಾರ್ಯಾಗಾರ ವೀಕ್ಷಿಸಿ ಮಾತನಾಡಿದ ಅವರು, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ ಎಂದರು.
ನಿರ್ದೇಶಕಿ ಭಾಗ್ಯಶ್ರೀ ಪಾಟೀಲ, ಪ್ರಾಚಾರ್ಯ ಡಾ.ಪಿ.ಬಿ.ಗವಾಣಿ, ಎ.ಎಸ್.ಕರಿಹೊಳಿ, ಅಖಿಲೇಶ ಜಾಧವ, ಸುನೀಲ ಪಿಡಾಯಿ, ಅಶ್ವಿನಿ ಕುಂಬಾರ, ಹನುಮಂತ ಮರಿಯಾಯಿ ಇದ್ದರು.
ಫೋಟೊ: 02 ರಾಯಬಾಗ 1
ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ವಿವೇಕಾನಂದ ಕಲಾ ಮಂದಿರ ಕಾಲೇಜಿನಲ್ಲಿ ಆಯೋಜಿಸಿದ್ದ ಭಿತ್ತಿ ಚಿತ್ರ ಕಾರ್ಯಾಗಾರವನ್ನು ಅಮರಸಿಂಹ ಪಾಟೀಲ ಹಾಗೂ ಭಾಗ್ಯಶ್ರೀ ಪಾಟೀಲ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಚಾರ್ಯ ಪಿ.ಬಿ.ಗವಾಣಿ ಇದ್ದರು.


