ಎರಡು ದಿನ ಭಾರಿ ಮಳೆ: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

Ravi Talawar
ಎರಡು ದಿನ ಭಾರಿ ಮಳೆ: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​
WhatsApp Group Join Now
Telegram Group Join Now

ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಮುಂದಿನ ಎರಡು ದಿನ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.

ತುಮಕೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಬಳ್ಳಾರಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೀದರ್, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗಲಿದೆ.

ಗಂಗಾವತಿ, ಧರ್ಮಸ್ಥಳ, ರೋಣ, ಬೆಳ್ತಂಗಡಿ, ಬಾದಾಮಿ, ತ್ಯಾಗರ್ತಿ, ಪುತ್ತೂರು, ಅಜ್ಜಂಪುರ, ಕುಡತಿನಿ, ನಾಯಕನಹಟ್ಟಿ, ಎಂಎಂಹಿಲ್ಸ್​, ಬನವಾಸಿ, ಮಾಣಿ, ಪಣಂಬೂರು, ಸಿದ್ದಾಪುರ, ಉಪ್ಪಿನಂಗಡಿ, ಕಾರ್ಕಳ, ಮಂಗಳೂರು, ಗದಗ, ಕುಷ್ಟಗಿ, ಬೆಳ್ಳಟ್ಟಿ, ಬೈಲಹೊಂಗಲ, ಹೊನ್ನಾಳಿ, ತರೀಕೆರೆ, ಗುಂಡ್ಲುಪೇಟೆ, ಶಿವಮೊಗ್ಗ, ಕಳಸ, ಕಡೂರು, ಎನ್​ಆರ್​ಪುರ, ಲಿಂಗನಮಕ್ಕಿ, ಕೊಳ್ಳೇಗಾಲ, ಚನ್ನಗಿರಿ, ಭಾಗಮಂಡಲ, ಯುಗಟಿಯಲ್ಲಿ ಮಳೆಯಾಗಿದೆ.

WhatsApp Group Join Now
Telegram Group Join Now
Share This Article